Wednesday 30 June 2021

ಗೋವಿನ ಹಾಡು ಬರೆಯಿನಾರ್ ಚೆನ್ನ ಪಟ್ಟಣ ವಾಸುದೇವಯ್ಯ

                      ಚೆನ್ನ ಪಟ್ಟಣ ವಾಸುದೇವಯ್ಯ

                        ‌ಗೋವಿನ ಹಾಡು ಬರೆಯಿನಾರ್


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೇ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಇತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ?
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು?

ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯೊಡಹುಟ್ಟುಗಳಿರಾ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು?
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರೈ

ಈವನು ಸೌಭಾಗ್ಯ ಸಂಪದ
ಭಾವಜಪಿತ ಕೃಷ್ಣನು

ಅಪ್ಪಣ್ಣ ಪೂಜಾರಿಡ್ದ್ ಹಂಪನ ಕಟ್ಟೆಯಾಂಡ್

                        ‌ ಅಪ್ಪಣ್ಣ ಪೂಜಾರಿ

ಬಾಜೆಲ್ಡ್ ಬತ್ತಿನಕ್ಲೆಗ್  ಬೆಲ್ಲ ನೀರ್ ಕೋರ್ದು ಬಾಜೆಲರಪವೊಂತ್ ನ ಅಪರೂಪದ ವ್ಯಕ್ತಿ ಅಪ್ಪಣ್ಣ ಪೂಜಾರಿ.ಮೇರೆರ್ದಾದ್ ಕುಡಲದ ಉಡಲ ಬಾಗ ಅಪ್ಪಣ್ಣ ಕಟ್ಟೆಯಾದ್ ದುಂಬುಗು ಹಂಪನ ಕಟ್ಟೆಯಾಂಡ್.

ಚಿತ್ರ ಕೃಪೆ-ಕೀರ್ತನ್ ಕುಡ್ಲ

Tuesday 29 June 2021

ಕೊಡಮಂದಾಯೆ,ಕುಕ್ಕಿನಂದಾಯೆ ಧರ್ಮರಸು ‌ಉಳ್ಳಾಯೆ ,ಅಂಡಾರು ಕಾರ್ಕಳ

 ಕೊಡಮಂದಾಯೆ,ಕುಕ್ಕಿನಂದಾಯೆ ಧರ್ಮರಸು ‌ಉಳ್ಳಾಯೆ

                        ಅಂಡಾರು ಕಾರ್ಕಳ

                     ‌‌‌‌‌       ಕೊಡಮಂದಾಯೆ

ಧರ್ಮರಸು ಉಳ್ಳಾಯೆ,ಕುಕ್ಕಿನಂದಾಯೆ,ಕೊಡಮಂದಾಯೆ

                    ‌‌‌‌‌                ಕೊಡಮಂದಾಯೆ

  

ಚಿತ್ರ ಕೃಪೆ-ವಿಜಯ್ ಅಜೆಕಾರ್

ವೀಡಿಯೋ ಲಿಂಕ್-https://youtu.be/Kqfuc1LPkBM

Thursday 3 June 2021

ದಿಲೀಪ್ ಫಜೀರ್ ಉರಗ ತಜ್ಞೆರ್ dileep phajeer uraga tajner

 ದಿಲೀಪ್ ಫಜೀರ್ ಉರಗ ತಜ್ಞೆರ್ Dileep phajeer uraga tajner

     

  

     




ಸರಪಾಡಿ ದೇಜಪ್ಪ ದೈವೊಲೆಗ್ ಕಟ್ಡುನ ಪುಗಾರ್ತೆದಾರ್

              ಸರಪಾಡಿ ದೇಜಪ್ಪ ಬಾಚಕೆರೆ   

    


   ಧರ್ಮದರ್ಶಿಗಳು - ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ         ಬಾಚಕೆರೆ - ಸರಪಾಡಿ

ಲೆಕ್ಕೆಸಿರಿ,ಕೊಡಮಂದಾಯ,ಪಿಲ್ಚಂಡಿ,ಪಂಜುರ್ಲಿ ಇಂಚ ಬಾರ್ಯಾತ್ ದೈವೊಲೆನ ಚಾಕಿರಿಡ್ ತುಳುನಾಡೊರ್ಮೆ ಪುಗಾರ್ತೆ ಪಡೆಯಿನಾರ್.ಯಕ್ಷಗಾನ ಮೇಳ ಶ್ರೀಕ್ಷೇತ್ರದ ಪುದರ್ಡ್ ಕಲಾಸೇವೆ ಮಲ್ತೊಂದುಂಡು.ಜ್ಯೋತಿಷ್ಯಲ ಪನ್ಪುನಾರ್

         ‌      ದೈವ ಚಾಕಿರಿಗ್ ಅರದಲ ಪಾಡುನಿ

                     ‌‌ಕೊಡಮಂದಾಯ ದೈವ ತೋಡಾರ್


             ‌‌‌‌          ‌            ಗಗ್ಗರದೆಚ್ಚಿ
                    ಪೆರಿಯ ಪಾದೆ ಕೊಡಮಂದಾಯ
                               ಅಣ್ಣಪ್ಪ ಪಂಜುರ್ಲಿ

                    ನಾರಾಲ್ದಾಯ ದೈವ ಕಡೇಶ್ವಾಲ್ಯ
            ‌‌‌‌  ಅಣ್ಣಪ್ಪ ಪಂಜುರ್ಲಿ ಶ್ರೀಧಾಮ ಮಾಣಿಲ
                ‌‌‌‌‌      ಕೊಡಮಂದಾಯೆ ಮುಗೇರ್
      
                              ‌         ‌  ಲೆಕ್ಕೆಸಿರಿ

    ಲೆಕ್ಕೆಸಿರಿನ ಅಪ್ಪರಂಬು ೭ ಜಿಡೆತ ಒರು.೯ಜಿಡೆಲ ಉ ಪ್ಪುಂಡು

ಕನ್ಯಾವುಲೆಕ್ಕೆಸಿರಿನ ಒಟ್ಟುಗುಪ್ಪುನ ಬಾವನ.ಲೆಕ್ಕೆಸಿರಿನ ದೂತೆ


 
 
             ‌‌‌ದುರ್ಗಾ ಪರಮೇಶ್ವರಿ ದೇಲ್ಯ ಬಾಚಕೆರೆ  ಸರಪಾಡಿ
 

ಉಲ್ಲಾಲ್ದಿ ಅಪ್ಪೆ ಮಾಣಿ