Friday 30 December 2011

ಲಂಚ ನಿವಾರಣೆಯಲ್ಲಿ ವಿಧ್ಯಾರ್ಥಿಗಳ ಪತ್ರ -ಲೇಖನ

        ಲಂಚ ನಿವಾರಣೆಯಲ್ಲಿ ವಿಧ್ಯಾರ್ಥಿಗಳ ಪಾತ್ರ
     


                            ಎಲ್ಲೆಂದರಲ್ಲಿ ಲಂಚ  ತನ್ನ ಹರಹನ್ನು ಚಾಚಿಕೊಂಡಿದೆ .ಎಷ್ಟೇ ಲಂಚ ಕೊಟ್ಟರೂ  ಮುಗಿಯದ ದಾಹ .ಎಷ್ಟೇ ಲಂಚವನ್ನು ತಡೆಗಟ್ಟಲು ಪ್ರಯತ್ನಿಸಿದರೂ ಕ್ಯಾನ್ಸರ್ನಂತೆ  ಅದು ನಮಗರಿವಾಗದಂತೆ ಬೆಳೆಯುತ್ತಿದೆ .ಲಂಚ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಎಲ್ಲ ಕ್ಷೇತ್ರಗಳಂತೆ ನ್ಯಾಯ ,ಕಾನೂನು ಕ್ಷೇತ್ರದಲ್ಲೂ ಲಂಚ ಮೂಗು ತೋರಿಸಿರುವುದು ವಿಪರ್ಯಾಸ .                                                                              ಎಲ್ಲ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವನ್ನೂ ಲಂಚ ಬಿಟ್ಟಿಲ್ಲ .ಪರೀಕ್ಷೆಯ ಪ್ರಷ್ಣಪತ್ರಿಕೆಯ ಮೂಲ ತಿಳಿಯಲು ಲಂಚ ,ತರಗತಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಲು ಲಂಚ ಶಾಲಾ ನಾಯಕತ್ವದ  ಬಗ್ಗೆ ಲಂಚ,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮೊದಲೇ ತಿಳಿಯಲು ಲಂಚ ಪರೀಕ್ಷೆಯಲ್ಲಿ ಒಬ್ಬನ ಪರವಾಗಿ ಇನ್ನೊಬ್ಬ ಪ್ರಶ್ನೆ ಪತ್ರಿಕೆ ಬರೆಯಲು ಲಂಚ -ಹೀಗೆ ಲಂಚ ಶಿಕ್ಷಣ ಕ್ಷೇತ್ರವನ್ನೂ ಬಿಟ್ಟಿಲ್ಲ.ಮಕ್ಕಳ ರೀತಿ ಹೀಗಾದರೆ ,ವರ್ಗಾವಣೆಗೆ ಬೇಕಾಗಿ ಲಂಚ,ಬಿ .ಓ. ಗಳನ್ನು ಒಲಿಸಿಕೊಳ್ಳಲು ಲಂಚ -ಇದೊಂದು ರೀತಿ.                                                                                                                    ಯೋಗ್ಯ ಶಿಕ್ಷಕರು ಶಾಲೆಯಲ್ಲಿ ಇದ್ದರೆ ಇದಕ್ಕೆ ಅವಕಾಶವನ್ನು  ನೀಡಲಾರರು .ತನಗೆ ಬಂದ ಸಂಬಳದಲ್ಲಿ ತ್ರಿಪ್ತರಾಗಿ ಆರಕ್ಕೇರದೆ ಮೂರಕ್ಕಿಳಿಯದೆ ಲಂಚದಿಂದ ದೂರವಿರುತ್ತಾರೆ .ವಿಧ್ಯಾರ್ಥಿಗಳು ಯಾವುದೇ ಭಯ ಪಡದೆ ಲಂಚದ ಬಗ್ಗೆ ಗುರುಗಳಲ್ಲಿ ಕೇಳಿ ತಿಳಿದುಕೊಳ್ಳಬೇಕು .ಶಿಕ್ಷಕರು ಕೂಡಾ ತರಗತಿಗಳಲ್ಲಿ ಲಂಚದ ದುಷ್ಪರಿನಮದ ಬಗ್ಗೆ ವಿಧ್ಯಾರ್ಥಿಗಳಿಗೆ ವಿವರಿಸಿ ಹೇಳಬೇಕು.ಒಬ್ಬ ಲಂಚ ಕೊಟ್ಟವ ಇನ್ನೊಬ್ಬನಿಂದ ಲಂಚ ಪಡೆಯುವುದು ಶತಸ್ಸಿದ್ದ .ಲಂಚ ಕೊಟ್ಟು ಪಾಸಾದ ವಿಧ್ಯಾರ್ಥಿಗಳು ಸಮಾಜದಲ್ಲಿ ಅನಾಹುತವನ್ನೇ ಮಾಡುತ್ತಾರೆ .ಅವರಿಂದ ಅಭಿವ್ರಿದ್ದಿ ಸಾಧ್ಯವಿಲ್ಲ .ಲಂಚದಿಂದ ಪಾಸಾದ ಒಬ್ಬ ಇನ್ಜಿನಿಅರ್ ,ಒಬ್ಬ ಡಾಕ್ಟರ್ ,ಒಬ್ಬ ವಕೀಲ ಯಾವ ರೀತಿಯ ಸಮಾಜ ಸೃಷ್ಟಿ ಮಾಡಬಲ್ಲರು ನೀವೇ ಊಹಿಸಿ .ಅಂಥವರು ಪಾಸಾಗಲು ಕೊಟ್ಟ ಲಂಚವನ್ನು ಸಮಾಜದ ಬಡ ವರ್ಗದಿಂದ ಕಸಿಯುತ್ತಾರೆ .ಇದರ ಬಗ್ಗೆ ವಿಧ್ಯಾರ್ಥಿಗಳಿಗೆ ಯೆಚರವಿದ್ದರೆ ಒಳಿತು .                                                     ಶಾಲೆಯಲ್ಲಿ ನಡೆಯುವ ಲಂಚದ,ಅವ್ಯವಹಾರದ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವಾದರೆ ಅವರು ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಬಹುದು .ಅವರು ನಿಮ್ಮ ಹೆಸರನ್ನು ಗೌಪ್ಯವಾಗಿಡುತ್ತಾರೆ.ಲಂಚ ಪಡೆದವರನ್ನು ಅಮಾನತುಗೊಲಿಸುತ್ತಾರೆ .ವೈಯಕ್ತಿಕವಾಗಿ ಲಂಚಕೋರರನ್ನು ಸದೆಬಡಿಯುವುದು ಕಷ್ಟ .ಸಾಮೂಹಿಕವಾಗಿ ಲಂಚಕೋರರನ್ನು ಎದುರಿಸಬೇಕು .ಆಗ ಸ್ವಲ್ಪವಾದರೂ ಲಂಚದ ಮಾರಿ ದೂರ ಸರಿದೀತು .ಯಾವುದೇ ಶಿಕ್ಷಣ ಸಂಸ್ಥೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಆಯಾ ಕ್ಷೇತ್ರದ ಸಂಪನ್ಮೂಲ ಅಧಿಕಾರಿಗಳಿಗೆ ತಿಳಿಸಬಹುದು .ಶಾಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದಾರೆ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ವಿಧ್ಯಾರ್ಥಿಗಲಿಗಿದೆ .ಒಬ್ಬ ವಿದ್ಯಾರ್ಥಿ ಇಂಥ ಗುಣವನ್ನು ಮಿಗೂಡಿಸಿದರೆ ಇತರ ವಿಧ್ಯಾರ್ಥಿಗಳು ನಿಮ್ಮನ್ನು ಹಿಂಬಾಲಿಸುತ್ತಾರೆ .                                ವರದಕ್ಷಿನೆಯೂ ಒಂದು ರೀತಿಯ ಲಂಚದ ಮೂಲ ಸೆಲೆ .ಮೈಗಳ್ಳತನ ಹುಡುಗರಲ್ಲಿ ಇದರಿಂದಾಗಿಯೇ ಮೈಗೂಡಿಕೊಳ್ಳುತ್ತದೆ.ಇದನ್ನು ಪ್ರಶ್ನಿಸುವ ಹಕ್ಕು ವಿಧ್ಯಾರ್ಥಿಗಲಿಗಿದೆ .ಒಬ್ಬ ಪಂಚಾಯತ್ ಉಗ್ರಾಣಿ ,ಪೇದೆಯಿಂದ ಹಿಡಿದು ಎಲ್ಲ ಸರಕಾರೀ,ಸರಕಾರೇತರ  ಅಭ್ಯರ್ಥಿಗಳಿಂದ ಹಿಡಿದು ಯಾರು ಲಂಚ ಪಡೆದರೂ ಅವರಿಂದ ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಬಹುದು .ಇದರಿಂದ ನೀವು ಒಳ್ಳೆಯ ಸಮಾಜದ ನಿರಮಾತ್ರ್ಗಲಾಗುತ್ತೀರಿ.                                                                                                             ಒಬ್ಬ ಲಂಚ ತೆಗೆದುಕೊಲ್ಲುವವನಿಗೆ ಎಷ್ಟು ಪಾಪವಿದೆಯೋ ಕೊತ್ತವನಿಗೂ ಅಷ್ಟೇ ಪಾಪವಿದೆ .ಅಂತೆಯೇ ಲಂಚಕೊಡುವ ,ಪದೆಯುವವರನ್ನು ನೋಡಿ ವಿಧ್ಯಾರ್ಥಿಗಳು ಸುಮ್ಮನಿದ್ದರೂ ಅದರ ಪಾಪದ ಫಲ ನಿಮ್ಮ ಮೈಗೂ ಅಂಟಿಕೊಳ್ಳುತ್ತದೆ .ಭವ್ಯ ಭಾರತದ ಕನಸ ಹೋತ ವಿಧ್ಯಾರ್ಥಿಗಳು ಲಂಚದ ಬಗ್ಗೆ ಜಾಗ್ರಿತರಾಗಬೇಕು .ಪ್ರಾಥಮಿಕ ಶಿಕ್ಷನದಿಂದಲೇ ವಿಧ್ಯಾರ್ಥಿಗಳಿಗೆ ಲಂಚದ ಬಗ್ಗೆ ,ಅದರ ಅನಾಹುತದ ಬಗ್ಗೆ ಗುರುಗಳು,ತಂದೆ ತಾಯಂದಿರು  ಮನವರಿಕೆ ಮಾಡಬೇಕು .ಶಾಲೆಗಳಲ್ಲಿ ಮಧ್ಯಪಾನ ಮಾಡಿ ಬರುವ ,ಬೀದಿ ಸಿಗರೇಟ್ ಸೇದುವ ,ಪಾನ್ಪರಾಗ್ ತಿನ್ನುವ ಗುರುಗಳನ್ನು ಹೇಗೆ ನೀವು ವಿರೋಧಿಸುತ್ತೀರೋ ಅಂತೆಯೇ ಲಂಚ ತೆಗೆಯುವ ಶಿಕ್ಷಕರನ್ನು ,ಸಂಸ್ಥೆಗಳನ್ನು ವಿರೋಧಿಸಬೇಕು .ಮಾನಸಿಕ ,ದೈಹಿಕ ,ಲೈಂಗಿಕ ಹಿಂಸೆ ಕೊಡುವ ಗುರುಗಳನ್ನು ಹೆದರದೆ ,ನಾಚಿಕೆ ಪಡದೆ ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿ .ಲಂಚದಿಂದಾಗಿ ಯೋಗ್ಯರಿಗೆ ಬೆಲೆಸಿಗದೆ ಅಪಾತ್ರರು ಮೆರೆಯುವಂತಾಗಿದೆ ,ಇದು ನಮ್ಮ ದೇಶದ ದುರಂತ.ಲಂಚನಿವರನೆಯಲ್ಲಿ,ಭಾರತದ ಏಳ್ಗೆಯಲ್ಲಿ ವಿಧ್ಯಾರ್ಥಿಗಳೇ ಸಿಂಹಪಾಲು ಪಡೆಯಿರಿ .

Tuesday 8 November 2011

ಊರ್ದ ತೆಕ್ಕರೆ -oorda tekkare

                                                ಊರ್ದ ತೆಕ್ಕರೆ -oorda tekkare
                                        


Monday 7 November 2011

ಕಂಬೆರ್ಲು -kamberlu

           ಕಂಬೆರ್ಲು -ಸತ್ಯ ಸಾರಮಾನಿಲು-ಕಾನದ ಕಟದೆರ್
                            ‌ಬೆಮ್ಮೆರ್ ಕಂಬೆರ್ಲು
                           

  ಕಾನದ ಕಟದೆರೆನ್ ಸತ್ಯಸಾರಮಾನಿಲು, ಕಂಬೆರ್ಲುಂದು ಪನ್ಪೆರ್ . ಮನ್ಸ ಜನಾಂಗದಕ್ಲೆಗ್ ಕುಲ ದೇವೆರಾದ್,ಕುಲ ದೈವಲ ಆದ್ ಒಲಿದ್ ಬೈದ್ ನ ಸತ್ಯ. ಪದಿನಾಜಿ ಬರಿತ ಕುಲ ದೈವ ಆದ್ ಮೆರೆಯಿನ ಅಪ್ಪೆ ಬೊಲ್ಲೆನ ಜೋಕುಲು ತುಳುನಾಡ ಸಾರಮಾನಿ ಸತ್ಯೊಲಾಯಿನ ಕಾನದ ಕಟದೆರ್. ಸಮಾಜದ ಶೋಷಣೆದ ವಿರುದ್ಧ ಸುರುಕು ಸೊರ ಲಕ್ಕಯಿನ ವೀರೆರ್ ಕಾನದ ಕಟದೆರ್.
   
         ಸತ್ಯ ಸಾರಮಾನಿಲು ಅಮರ್ ಬೀರೆರ್ ಕಾನದ ಕಟದೆರ್

   
ಮಾಣಿಕ್ಯೊದ ಕಲ್ಲ್ ನ್ ಉಡೆತ್ ದ್  ಉದಿಯ ಬೆಂದಿನ ಮಾಯೆದ ಈ ಸತ್ಯೊಲೆಗ್ ಸುರೂತ ಪೂಜೆ .ಸುರೂತ ಹಕ್ಕ್ ಅವು ಕಂಬೆರ್ಲೆಗ್ . ಕಲ್ಲ್ ದಾಂತಿ ಕಲಟ್ ,ಕಲೆ ನಿಲೆಟ್ ಮೆರೆಯೊಂದು ಸಂತಾನ ಭಾಗ್ಯೊನು ಒದಗಾದ್ ಕೊರ್ಪುನ ಸತ್ಯೋಲು. ಗೊಲಂಬುರ ದಂಟ್ ಡ್ ಪಾದೆನ್ ಪುಡತ್ ದ್ ತೀರ್ಥ ದೆಯ್ದ್ ನ ಮೊಕುಲು ಸಾರಮುಪ್ಪನ್ನೆರ್ .
     

  ಕಂಬೆರ್ಲೆನ ಕಲ ಪಡ್ಡಾಯಿ ಬೊಲ್ಲೆ(ಪಡುಬೆಳ್ಳೆ)ಒಡಿಪು ಜಿಲ್ಲೆ
 
            ಬೆಮ್ಮೆರೆ ಆರಾಧನೆ ಕಂಬೆರ್ಲೆನ ಕಲೊಟ್ಲ ನಡಪುಂಡು .ಅಲೇರ ಪಂಜುರ್ಲಿನ ಆರಾದನೆ ಸತ್ಯಸಾರಮಾನಿಲೆನೊಟ್ಟುಗು ಉಪ್ಪುಂಡು. ಕಂಬೆರ್ಲು ಮೂಲದ ಸತ್ಯೊಲಾಂಡಲ ಬೆಮ್ಮೆರೆ ಆರಾಧನೆ ಒಂತೆ ಎತ್ತೇಸೊ ಉಪ್ಪುಂಡು . ಬೆಮ್ಮೆರ್ ಇಪ್ಪುನಲ್ಪ ಕಂಬೆರ್ಲೆ ಕಲ ಇತ್ತ್ಂಡಲ ಅವ್ಲು ಕಂಬೆರ್ಲೆಗ್ ಬೇತೆನೇ ಆರಾಧನೆ . ಬೆಮ್ಮೆರೆಗ್ ಬೇತೆನೆ ಆರಾದನೆ . 
    
ಕಂಬೆರ್ಲೆನ ಕಲ ಪಡ್ಡಾಯಿ ಬೊಲ್ಲೆ(ಪಡುಬೆಳ್ಳೆ)ಒಡಿಪು ಜಿಲ್ಲೆ

     ಮನ್ಸ ಜನಾಂಗೊಡು ಕಂಬೆರ್ಲೆಗ್ ಬೆಮ್ಮೆರೆ ಮಾನಾದಿಗೆ ಉಂಡು . ಕಂಬೆರ್ಲೆಗ್ ಮುಗ, ಮೂರ್ತಿ ,ಪಾಪೆ ಇಜ್ಜಿ. ಕಾಲಿ ಆಯುಧ ಮಾತ್ರ . ಬೆಮ್ಮೆರೆ ಕಂಬೆರ್ಲು ಪಂಡ್ ದ್ ಕೆಲವೆರ್ನ ಅಭಿಪ್ರಾಯ. ಬಬ್ಬುನ ಕಲೊಟು ಹೆಚ್ಚಾದ್ ಕಂಬೆರ್ಲೆಗ್ ಆರಾಧನೆ ಉಪ್ಪುಂಡು.  ಬಬ್ಬು ಮುಂಡಾಲ ಜನಾಂಗದಾಯೆ .ಕೆಲವು ಗುತ್ತು ಬರ್ಕೆಲೆಡ್ ಬಬ್ಬುನ ಕೊಟ್ಯ ಇತ್ತ್ ದ್ ಮುಂಂಡಾಲೆರ್ ಬಬ್ಬುನ ಚಾಕಿರಿಗುಂತುವೆರ್.
         

             ಒಡಿಪು ಕುಡ್ಲದ ಕಡಲ ಬರಿಟ್ ಮುಂಡಾಲ ಜನಾಂಗ ಹೆಚ್ಚಾದಿತ್ತ್ ದ್ ಅಕ್ಲೆಗ್ ಗುರು ಇತ್ತ್ ಲೆಕ ಬಬ್ಬು ಉಪ್ಪುವೆ . ಬಬ್ಬುಗು ಉಂತುನಾರೆ  ಕಂಬೆರ್ಲೆಗ್ಲ ಮಾನೆಚ್ಚಿಲ್ಗ್ ಉಂತುನಿ . ಕಂಬೆರ್ಲೆಗ್ ಮುಗ ಮೂರ್ತಿ ಇಜ್ಜಂದಿಲೆಕನೆ ಬೆಮ್ಮೆರೆಗ್ಲಾ  ಮುುಗ ಮೂರ್ತಿ ಇಜ್ಜಿ .
    

 ಆಂಡ ಒಂಜಿ ಬಾರೆದ ಬಂಬೆದ ಗುಂಡ ಕಟ್ಟ್ ದ್ ಬೆಮ್ಮೆರೆ ಆರಾಧನೆ ನಡತೊಂತ್ಂಡ್ . ಇನಿಕ್ಲಾ ಮುಗೇರ ಸತ್ಯೊಲೆನ ನೇಮೊಡು ಬಾರೆದ ಬಂಬೆದ ಸುತ್ಯೆ ದೀದ್ ಬೆಮ್ಮೆರೆನ್ ನಾಟಾವುನ ಬಾರೀ ಪೊರ್ಲುದ ಆರಾಧನೆ ಉಂಡು.
  

ಇನಿ ಸರಿಯಾಯಿನ ಬೆಮ್ಮೆರೆ  ಆರಾಧನೆ ಒರಿದ್ ನಿ ಮುಗೇರ ಸತ್ಯೊಲೆನ ನೇಮೊಡು,ಸತ್ಯಸಾರಮಾನಿಲ್ನ ಕಲೊಟು ಮಾತ್ರ . ರಡ್ಡ್ ಸತ್ಯೊಲೆನ್ ಒಂಜೇ ಕಲೊಟು ರಡ್ಡ್ ಪುದರ್ಡ್ ಲೆತ್ತ್ ದ್ ಆರಾಧನೆ ಮಲ್ಪುನೆಕ್ ಉಂದೊಂಜಿ ಎಡ್ಡೆ ಉದಾರ್ಮೆ.ಸತ್ಯ ಮುಪ್ಪನ್ನಾರ್,/ಕಂಬೆರ್ಲು. 
           
      ‌‌‌‌‌                    ಬೇತೆ ಬೇತೆ ದುಡಿಕುಲು

                       ಬೆಮ್ಮೆರೆನ್ಲಾ ಬೇತೆ ಬೇತೆ ಪುದರ್ಡ್ ಆರಾಧನೆ ಮಲ್ಪುವೆರ್ . ಕೆಲವು ಗರಡಿಲೆಡ್ ಉರಿ ಬೆಮ್ಮೆರ್ ಇತ್ತ್ಂಡ ಕೆಲವು ತಿಕ್ ಡ್ ಉದಿಪನ ಜಲ ಬೆಮ್ಮೆರ್ಂದ್ ,ಕೆಲವು ಕಡೆಟ್ ಜಯವುಳ್ಳ ಲಕ್ಕಣ್ಣ ಬೆಮ್ಮೆರ್ಂದ್ ,ಕೆಲವು ತಿಕ್ಡ್ ಕೆಮ್ಮಲೆತ ಬೆಮ್ಮೆರ್ಂದ್ ಪನ್ಪೆರ್.
  

ಕೆಲವೆರೆ ಅಭಿಪ್ರಾಯ ಪ್ರಕಾರ ಆದಿಡ್ ಬತ್ತ್ ನಕುಲು  ಆದಿ ಮುಗೆರ್ಲ್ ಪಂಡ ಮುದ್ದ ಕಳಲೆರ್ , ಕೋಟಿ  ಚೆನ್ನಯೆರ್ ,ಕಾನದ ,ಕಟದೆರ್.ಆಯುದದ ದೃಷ್ಠಿಡ್ ತೂಪುಂಡ ಅಲ್ಂಬುಡದ ದಂಟೆ ಸತ್ಯ ಸಾರಮಾನಿಲೆನ.ಅಪಗ ಅಕುಲು ಸುರುತಕುಲಾಪೆರ್. ,ಉಳ್ಳಾಕ್ಲು ಪಂಡ ಕಿನ್ನಿಮಾನಿ ,ಪೂಮಾನಿ ,ಕಾಂತಬಾರೆ ,ಬುದಬಾರೆ,ಅಬ್ಬಗ ದಾರಗ . ಮೊಕ್ಲು ಪೂರಾ ಸಮಕಾಲೀನೇರಾದಿತ್ತ್ ನ ಅಮ‌ರ್ ರ್ಜೋಕುಲು .
     

ಆಂಡ ಸೊನ್ನೆ ಗಿಂಡೆ ಅಮರ್ ಜೋಕ್ಲತ್ತ್. ಸೊನ್ನೆ ಸಿರಿನ ಮಗಲಾಂಡ ಗಿಂಡೆ ಒರಿ ಬಿರಣನ ಮಗಳಾದಿತ್ತ್ ದ್ ಕಾನ ಬೊಟ್ಟುದ ಅಜ್ಜೆರ್ ಈ ರಡ್ಡ್ ಜೋಕ್ಲೆನ್ ಸಾಂಕುನಿ . 
     
 ಸತ್ಯ ಸಾರಮಾನಿಲೆನ ಮೂಲಬನ ಅಲೇರಿ ಬನ,ಕಿಜನೊಟ್ಟು ಬರ್ಕೆ,ಮಿಜಾರ್,ಬೆದ್ರ, ಚಿತ್ರ ಕೃಪೆ-ತುಡರ್ ಯೂಟ್ಯೂಬ್ ನಾರಾವಿ

 ಕಾನದ ಕಟದೆರೆನ್ ಸತ್ಯ ಸಾರಮಾನಿ ,ಸತ್ಯ ಪದಿನಾಜಿ ,ಕಲೊಟು ಕಂಬೆರ್ಲು ,ಸಾರ ಮುಪ್ಪಣ್ಯೇರ್,ಕಿನ್ನಿಮಾನಿ ಪೂಮಾನಿ ,ತುಳುನಾಡ್ ದ ಸತ್ಯ ದೈವೊಲುಂದು ಆರಾಧನೆ ಮಲ್ಪುವೆರ್ .  
    

ಕಾನದ ಕಟದೆರೆನ್ ಬೇತೆ ಸಮುದಾಯದಕ್ಲ್ ಒತ್ತಂದಿನೆರ್ದಾತ್ರ ಅಕ್ಲೆ ಚರಿತ್ರೆ ಮಾಯಕಾತ್ಂಡ್ . ತುಳುನಾಡ್ ಗ್  ಅತಿಕಾರೆ ಬಿದೆನ್ ಕನತಿನಕ್ಲ್,ಕಾರಿ ಕಬಿಲನ್ ಕಟ್ಟ್ ದ್ ದತ್ತ್ ನಕುಲು ಕೋಟಿ ಚೆನ್ನಯೆರೆ ಸಮಕಾಲೀನೆರಾಯಿನ ಮನ್ಸ ಜನಾಂಗದ ಕಾನದ ಕಟದ ಸತ್ಯೋಲು/ಸತ್ಯ ಸಾರಮಾನಿಲು .
ಕಂರ್ಗೋಲು ನಲಿಕೆಗ್ಲ ಕಂಬೆರ್ಲೆನ ಆರಾದನೆಗ್ಲ ಸಂಬಂದ ಉಂಡು

ಈ ಬರವುಗು ಆಕರ :-ನವೀನ್ ಸುವರ್ಣ ಪಡ್ರೆ ,ಹರ್ಷಿತ್ ,ಶೈಲು ಬಿರ್ವ ,ಕಿರಣ್ ಬಂಟ್ವಾಳ್
video link:-https://www.youtube.com/watch?v=IL-pQ44DOy4



ಬೈದೆರ್ಲು-ಕೋಟಿ ಚೆನ್ನಯೆರ್
ಮುಗ್ಗೆರ್ಲು-ಮುದ್ದ ಕಲಲ-ಗಡಿ ಮುಗೆರ್ಲೆನೆಟ್; ಎಣ್ಮೂರ ದೆಯ್ಯು -ಕೆಲತ ಪೆರ್ನು-ಅನಿ/ಹನಿ ಮುಗೇರ್ಲೆನೆಟ್
ಕಂಬೆರ್ಲು-ಕಾನದ ಕಟದ

Saturday 15 October 2011

ಹೆಣ್ಣನ್ನು ಮನೋದೌರ್ಬಲ್ಯದಿಂದ ದೂರವಿರಿಸಿ

          ಹೆಣ್ಣು ಕೇವಲ ಹೆರುವ ಯಂತ್ರವಲ್ಲ .ಆಕೆಗೂ ಒಂದು ಮನಸ್ಸಿದೆ .ಆದರೆ ಆಕೆಯ ಮನಸ್ಸು ಸೂಕ್ಷ್ಮವಾಗಿ ಭಾವನಾತ್ಮಕವಾಗಿರುತದೆ .ಆಕೆ ಆತ್ಮೀಯತೆಯನ್ನು ಬಯಸುತ್ತಾಳೆ, ಪ್ರೀತಿಯಿಂದ ಎಲ್ಲರನ್ನೂ ಗೌರವಿಸುತ್ತಾಳೆ . ತನ್ನ ಪೋಷಕರ ಆ ಮೇಲೆ ತನ್ನ ಗಂಡನ ತದನಂತರ ಮಕ್ಕಳ ಪ್ರೀತಿಗಾಗಿ ಹಂಬಲಿಸುತ್ತಾಳೆ .ಅವಳಿಗೆ ಐಶ್ವರ್ಯದ ಅಗತ್ಯವಿರುವುದಿಲ್ಲ ,ಹಣದ ಆಮಿಶವಿರುವುದಿಲ್ಲ ,ಆಕೆ ಬಯಸುವುದು ಮುಗ್ಧ ಪ್ರೀತಿಯನ್ನು.ಅವಳು ಸರ್ವಸ್ವವನ್ನೂ ಮರೆತು ಗಂಡ ಹಾಗೂ ತಾನು ಕಾಲಿಟ್ಟ ಮನೆ ಮಂದಿಯೆಲ್ಲ ತನ್ನವರೆಂದು ತಿಳಿದು ಬದುಕುತ್ತಾಳೆ.ಅವಳನ್ನು ಅರ್ಥೈಸಿ ಅವಳಿಗೆ ಧೈರ್ಯ ತುಂಬುವುದು ನಮ್ಮೆಲ್ಲೆರ ಆದ್ಯ ಕರ್ತವ್ಯವಾಗಿದೆ.ಯಾಕೆಂದೆ ತಂದೆ ತಾಯಿ ಕುಟುಂಬ ಸಂಸಾರವನ್ನು ತೊರೆದು ಆಕೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳಷ್ಟು ಕಾಲ ಹಿಡಿಯುತ್ತದೆ.ತನ್ನ ಬಾಲ್ಯದ ಆ ಹಿಂದಿನ ಬದುಕಿನ ನೆನಪು ಅವಳ ಮನಸಲ್ಲಿ ಬಂದು ಹೋಗುತ್ತಿರುತ್ತದೆ.ಅಂತಹ ಒಳ್ಳೆಯ ಆರೋಗ್ಯಕರ ವಾತಾವರಣವನ್ನು ಗಂಡನ ಮನೆಯವರು ಕಲ್ಪಿಸಿಕೊಟ್ಟರೆ ಇಲ್ಲಿಗೆ ಹೊಂದಿಕೊಳ್ಳಲು ಆಕೆ ಪ್ರಯತ್ನಿಸುತ್ತಾಳೆ . ಅವಳ ಮನಸ್ಸಲ್ಲಿ ಶೂನ್ಯ ಭಾವನೆ ಬರಲು,ಏಕಾಂಗಿತನ ಕಾಡಲು ಗಂಡನ ಮನೆಯವರು ಬಿಡಬಾರದು .ಆಕೆ ಮಂಕಾಗಿರದಂತೆ ಅವಳನ್ನು ನೋಡಿಕೊಳ್ಳುವುದು ಆಕೆಯ ಮನೆಮಂದಿಯ ಆದ್ಯ ಕರ್ತವ್ಯ .                                              ಹೆಣ್ಣನ್ನು ಕನ್ಯಾದಾನ ಎಂದು ಧಾರೆಯೆರೆದು ಕೊಡುತ್ತಾರೆ.ದಾನ ಎಂಬುದಕ್ಕೆ ಅತ್ಯಂತ ಉನ್ನತವಾದ,ಉತ್ಕೃಷ್ಟವಾದ,ಸುಂದರವಾದ ಪವಿತ್ರವಾದ,ಸಂಭ್ರಮದ,ಸಂತೋಷದ ವಾತಾವರಣದ ಶ್ರೇಷ್ಠ ಅರ್ಥವಿದೆ.ಕನ್ಯಾದಾನವೆಂದರೆ ಹೆಣ್ಣಿಗೆ ಮಾಡುವ ದೊಡ್ಡ ಸನ್ಮಾನವೇ ಹೊರತು ಅವಮಾನವಲ್ಲ. ದಾನವನ್ನು ಒಂದು ವೃತದಂತೆ ನೋಡಿದವರು ಹಿರಿಯರು. ನಾವು ಏನ್ನಾದರೂ ದಾನವಾಗಿ ಕೊಟ್ಟು ಏನನ್ನಾದರೂ ಸ್ವೀಕರಿಸಿದಂತೆ ನಾವು ಕನ್ಯಾದಾನ ಮಾಡುವ ಮೂಲಕ ಹೊಸ ಸಂಬಂದಗಳನ್ನು ಸ್ವೀಕರಿಸೇಕು. ಮದುವೆ ಮಾಡಿಕೊಡುವಾಗ ಹೆಣ್ಣಿಗೆ,ಮದುವೆ ಮಾಡುವ ಮನೆ ಮಂದಿಗೆ,ಹೆಣ್ಣನ್ನು ಸ್ವೀಕಾರ ಮಾಡುವ ಗಂಡಿಗೆ,ಆತನ ಮನೆ ಮಂದಿಗೆ ಒಟ್ಟು ಎರಡು ಬಾಂಧವ್ಯಗಳು ಕೂಡಿದ ಮನೆ ಮಂದಿಗೆ ಸಂತೋಷದ ವಾತಾವರಣವೇರ್ಪಡುತ್ತದೆ.ಆಕೆಗೆ ಬಾಲ್ಯದಿಂದ ಸಂಸ್ಕಾರ,ನೈತಿಕ ಶಿಕ್ಷಣ ಕೊಟ್ಟು ಆಕೆಗೆ ಯೋಗ್ಯ ವರನನ್ನು ಆಯ್ಕೆ ಮಾಡಿ ಹೊಸ ಕುಟುಂಬಕ್ಕೆ ಸೊಸೆಯಾಗಿ ಕಳುಹಿಸಿಕೊಡುವದು ಜವಾಬ್ದಾರಿಯೊಂದಿಗೆ ಸಂತೋಷದಾಯಕವೂ ಆಗಿರುತ್ತದೆ..ದಾರೆ ಎರೆದು ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು ಆಕೆಯನ್ನು ಬಿಟ್ಟು ಕೈತೊಳೆದು ಬಿಟ್ಟರೆ ಅದುವರೆಗಿನ ಆಕೆಯ ಸಂಸಾರ ಬಂಧನಕ್ಕೆ ಬೆಲೆಯೇ ಇಲ್ಲವೇ?.ಸ್ವಗೋತ್ರದಲ್ಲಿ ಮದುವೆಯಾದರೆ ಮುಂದೆ ವಂಶಾವಳಿ ಬೆಳೆಯಲು ಕಷ್ಟವಾಗುತ್ತದೆ .ಆದರೆ ರಕ್ತ ಸಂಬಂದ ಏಳೇಳು ಜನ್ಮ ಕಳೆದರೂ ಬಿಟ್ಟು ಹೋಗುವಂತದ್ದಲ್ಲ.  ಹೆಚ್ಹಾಗಿ ಮದುವೆಯ ಹೊಸದರಲ್ಲಿ ಮನೆಯವರು ನಮ್ಮ ಭಾರ ಕಳೆಯಿತೆಂದು ಹೆಣ್ಣನ್ನು ಗಂಡನ ಮನೆಗೆ ಕಳಿಸಿ ಕೊಡುತ್ತಾರೆ .ಆದರೆ ಆಕೆ ಹೋಗುವುದು ಹೊಸ ಮನೆಗೆ .ಅಲ್ಲಿಗೆ ಹೊಂದಿಕೊಳ್ಳಲು ಆಕೆಗೆ ತುಂಬಾ ಕಾಲಾವಕಾಶ ಬೇಕಾಗುತ್ತದೆ .ಅಲ್ಲಿ ಎಷ್ಟೇ ಒಳ್ಳೆಯ ಅತ್ತೆ ಮಾವಂದಿರಿರಲಿ;ಗಂಡನಿರಲಿ ಆಕೆ ಪದೇ ಪದೇ ತವರನ್ನು ನೆನೆಯುತ್ತಿರುತ್ತಾಳೆ .ಆಗ ತಂದೆ ತಾಯಂದಿರು ಆಕೆಗೆ ಬಂದು ಸಮಾಧಾನ ಹೇಳಬೇಕಾಗುತ್ತದೆ .ಎಷ್ಟೇ ಸಿರಿವಂತ ಗಂಡ ಸಿಗಲಿ ಆಕೆ ಬಡ ತವರನ್ನು ಮರೆಯಲಾರಳು.ಅವಳಿಗೆ ಅತ್ತೆ  ಮಾವ ಎಷ್ಟೇ ಒಳ್ಳೆಯವರೇ ಸಿಗಲಿ  ಆಕೆ ತಂದೆ ತಾಯಿ,ಅಕ್ಕ ತಂಗಿ,ಅಣ್ಣ ತಮ್ಮಂದಿರನ್ನು ನೆನೆದು ಕೆಲವೊಮ್ಮೆ ಮಂಕಾಗಿ ಕೂರುವುದುಂಟು .ಕೆಲವು ಹೆಣ್ಣು ಮಕ್ಕಳು ತನ್ನ ನೋವನ್ನು ಇತರರಲ್ಲಿ ಹಂಚಿಕೊಂಡರೆ ಮತ್ತೆ ಕೆಲವು ಹೆಣ್ಣು ಮಕ್ಕಳು ಮನದಲ್ಲೇ  ಇಟ್ಟುಕೊಂಡು ಕೊರಗುತ್ತಿರುತ್ತಾರೆ .ಅದು ಅಪಾಯ .ಅಂತವರು ಮುಂದೆ ಮಾನಸಿಕ ಸ್ಥಿಮಿತ ಕಳಕೊಳ್ಳುವುದೂ ಇದೆ .ಹಾಗಾಗದಂತೆ ಮನೆಯವರು ಒಟ್ಟು ಕೂತು ಸಮಸ್ಯೆಯ ಪರಿಹಾರದ ಕಡೆ ಗಮನ ಹರಿಸಬೇಕು .                                                                                                                                                               ದಾನ ಎಂಬುದು ಸಂಸ್ಕೃತದ ಪದವಾದರೂ ಆ ಶಬ್ದಕ್ಕೆ ಒಂದು ಸಾಂಸ್ಕೃತಿಕ ಭವ್ಯ,ದಿವ್ಯ ಪರಂಪರೆಯಿದೆ.ಅದನ್ನು ಆಂಗ್ಲ ಬಾಷೆಯ ಗಿವಿಂಗ್ ಎವೇ ಎಂದರೆ ಸಾಗರವನ್ನು ಬಾವಿಯೊಳಗಿಳಿಸಿದಂತಾಗುತ್ತದೆ.  ಕೆಲವೊಂದು ಹೆಣ್ಣು ಮಕ್ಕಳನ್ನು ಹೊರತುಪಡಿಸಿ ಹೆಚ್ಹಿನ ಹೆಣ್ಣು ಮಕ್ಕಳು ಭಾವಜೀವಿಗಳೇ .ಇತರರ ನೋವನ್ನು ಕಂಡು  ಗಂಡಸರಿಗಿಂತ ಹೆಣ್ಣು ಮಕ್ಕಳೇ ಹೆಚ್ಚು ಕೊರಗುವುದು .ಹಿಂದಿನಂತೆ ಆಧುನಿಕ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಏಟು ಬೀಳುವುದು ಕಡಿಮೆ .ಆದರೂ ಮದುವೆಯಾದ ಹೊಸದರಲ್ಲಿ ಗಂಡ ತನ್ನಲ್ಲಿ ಅನ್ಯೋನ್ಯತೆಯಿಂದ ಇದ್ದು ಕೆಲ ದಿನ,ತಿಂಗಳಲ್ಲಿ  ಹೊರದೇಶಕ್ಕೆ ಹೋದರೆ ಏನೋ ಕಳಕೊಂಡಂತೆ ಆಕೆ ಮಂಕಾಗಿರುತ್ತಾಳೆ .ಅವಳಿಗೆ ಉದ್ಯೋಗವಿದ್ದರೆ ಅಷ್ಟು ಸಮಸ್ಯೆಯಾಗದು .ಹೋದ ಗಂಡ ದಿನಕ್ಕೆರಡು ಬಾರಿಯಾದರೂ ಫೋನಿನಲ್ಲಿ ಮಾತಾಡಿದರೆ ಸ್ವಲ್ಪ ನಿಟ್ಟುಸಿರು ಬಿಡುತ್ತಾಳೆ .ಆದರೆ ಗಂಡನ ಫೋನ್ ಬಾರದಿದ್ದರೆ ಮಂಕಾಗಿರುತ್ತಾಳೆ .ಮನೆಯಲ್ಲಿ ತಂದೆ ತಾಯಿಯ ಪ್ರೀತಿ ಪಡೆದ ಹೆಣ್ಣಿಗೆ ಅತ್ತೆ ಮನೆಯಲ್ಲಿ ಪ್ರೀತಿ ಸಿಗದಿದ್ದರೆ ಮನದಲ್ಲೇ ಕೊರಗುತ್ತಾ ಸಣ್ಣಗಾಗುತ್ತಾಳೆ .ಕೆಲವೊಮ್ಮೆ ದಾಂಪತ್ಯದಲ್ಲೂ ಹೆಣ್ಣಿಗೆ ಹೆಚ್ಚು ಅಂಜಿಕೆ ಇರುತ್ತದೆ. ಯಾಕೆಂದರೆ ಅವಳಿಗೆ ಬದುಕಲ್ಲಿ ಅದು ಹೊಸದು .ಆಕೆ ಹೊಂದಿಕೊಳ್ಳುವವರೆಗೆ ಗಂಡ ಆಕೆಯನ್ನು ಕಾಡದೆ ಕಾದು ಆಕೆಯೊಡನೆ ಸಂಸಾರ ಮಾಡಿದರೆ ಅಲ್ಲಿ ಮುಂದೆ ಪ್ರೀತಿಯ ಬಂಧ ಗಟ್ಟಿಯಾಗುತ್ತದೆ.  ಬಾಲ್ಯದಲ್ಲಿ ಅಣ್ಣ ತಮ್ಮಂದಿರೊಡನೆ  ಹಠಮಾರಿಯಾಗಿದ್ದ ಹೆಣ್ಣು  ಮದುವೆಯಾದ ನಂತರ ತುಂಬಾ ಮೃದುವಾಗುತ್ತಾಳೆ .ಯಾಕೆಂದರೆ ಆಕೆ ಎಷ್ಟೋ ವರ್ಷಗಳಿಂದ ತಂದೆ ತಾಯಿಯ ಬಳಿ ಇದ್ದವಳಲ್ಲವೇ?.                                                                                                                                                                   ಹೆಣ್ಣು ಕೆಲವೊಮ್ಮೆ ಗಂಡನನ್ನು ಅನಿವಾರ್ಯವಾಗಿ ಕಳಕೊಲ್ಲುವುದುಂಟು .ನಮ್ಮ ಗೆಳತಿ ಶಿಕ್ಷಕಿಯೊಬ್ಬರ ತಂದೆ ತಾಯಿ ಮಗಳಿಗೆ ಬರುವ ಗಂಡ ಶ್ರೀಮಂತನಾಗಬೇಕೆಂದು ಹಠ ಹಿಡಿದು ಒಬ್ಬ ಶ್ರೀಮಂತನನ್ನು ಮದುವೆ ಮಾಡಿದರು .ಆತ ಹಳದಿ ಕಾಯಿಲೆಯಿಂದ ನಾಲ್ಕೇ ತಿಂಗಳಲ್ಲಿ ಅಸು ನೀಗಿದ .ಆ ಹೆಣ್ಣು ಮಗಳು ಏನು ಮಾಡಬೇಕು ಹೇಳಿ ?.ಆಕೆ ಇಷ್ಟಪಟ್ಟ ಬಡ ಹುಡುಗ ಮದುವೆಯಾಗಿ ಚೆನ್ನಾಗಿದ್ದಾನೆ .ದುರಾದೃಷ್ಟವೆಂದರೆ ಇಬ್ಬರೂ ಒಂದೇ ಶಾಲೆಯಲ್ಲಿ ದುಡಿಯುವುದು .ಶಿಕ್ಷಕಿಯಾದ ಕಾರಣ  ತನ್ನ ನೋವನ್ನು ಶಾಲೆಯ ಮಕ್ಕಳ ಆಟಪಾಠಗಳನ್ನು ನೋಡಿ ಮರೆತರೆ ಹೆಚ್ಚಾಗಿ ರಜಾ ದಿನಗಳಲ್ಲಿ ಮಂಕಾಗಿರುತ್ತಾಳೆ .ಎಷ್ಟಾದರೂ ಹೆಣ್ಣು ಹೃದಯವಲ್ಲವೇ ?.ಬೇಕಾದಷ್ಟು ಆಸ್ಥಿಯಿದ್ದು ಗಂಡನ ಕಳಕೊಂಡ ಹೆಂಗಸಿನ  ನೋವು ಅದೆಷ್ಟು ಆಳ?.ಇಳಿವಯಸ್ಸಿನಲ್ಲಿ ಗಂಡ ಇಲ್ಲ ಎಂಬ ವ್ಯಥೆ ಒಂದೆಡೆಯಾದರೆ ,ಇದ್ದ ಮಗನೊಬ್ಬ ದೂರದಲ್ಲಿ  ಕೆಲಸಕ್ಕೆ ಹೋದರೆ ಆಕೆಯಲ್ಲಿ ಏಕಾಂಗಿತನ ಮನೆ ಮಾಡುತ್ತದೆ .ಆಕೆಗೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ .ಕೆಲವೊಮ್ಮೆ ಬೇರೆಯವರನ್ನು ಕಂಡಾಗ ಹರಿ ಹಾಯುವುದೂ ಉಂಟು .                  ಹೆಣ್ಣಿಗೆ ಸ್ವಾತಂತ್ರ್ಯವಿದೆ ಎಂದು ಒಪ್ಪಬಹುದು ಆದರೆ ಎಷ್ಟರ ಮಟ್ಟಿಗೆ ಆಕೆಗೆ ಸ್ವಾತಂತ್ರ್ಯವಿದೆ?.ಇದನ್ನು ನಾವು ಗಮನಿಸಬೇಕು .ಆಫೀಸುಗಳಲ್ಲಿ  ದುಡಿಯುವ ಹೆಣ್ಣು ಅವಸರವಸರವಾಗಿ ಮನೆಗೆ ಹೋಗುತ್ತಿದ್ದರೆ ಯಾಕಮ್ಮಾ ಇಷ್ಟು ತರಾತುರಿ ಎಂದು ಕೇಳಿದರೆ ಅವ್ರು ಬಯ್ತಾರೆ ತಡವಾದ್ರೆ ಎಂಬುತ್ತರ . ಮನೆಗೆ ಬರುವುದು ತಡವಾದರೆ ಈವತ್ತು ಯಾರೊಟ್ಟಿಗೆ ಹೋಗಿದ್ದಿ ಎಂಬ ಕೆಟ್ಟ ಯೋಚನೆಯ ಮಾತು .ಇದಕ್ಕಾಗಿ ಅವಸರವಸರವಾಗಿ ಮದುವೆಯಾದ ಹೆಚ್ಚಿನ ಹೆಣ್ಣು ಮಕ್ಕಳು ಮನೆಗೆ ಅವಸರವಸರವಾಗಿ ಹೋಗುತ್ತಾರೆ.ಒಬ್ಬಾಕೆ ಶಿಕ್ಷಕಿಯ ಕಷ್ಟಗಳನ್ನು ಒಬ್ಬಾತ ಶಿಕ್ಷಕನಿಗೆ ಮಾತ್ರ ಅರ್ಥೈಸಲು ಸಾಧ್ಯ.ಹಾಗಾಗಿ ಶಿಕ್ಷಕಿ ಆದಷ್ಟು ಶಿಕ್ಷಕರನ್ನು ಬಾಳ ಸಂಗಾತಿಯಾಗಿ ಆರಿಸಿದರೆ‌ಒಳಿತು .ಹೆಣ್ಣನ್ನು ಕೇವಲವಾಗಿ ನೋಡದೆ ಆಕೆಗೂ ಒಂದು ಹೃದಯವಿದೆ ಎಂಬುದನ್ನು ಅರ್ಥೈಸಬೇಕು .ಬಂಜೆತನ ಹೆಣ್ಣಿಗೆ ಶಾಪವಲ್ಲ .ಪ್ರತಿಯೊಬ್ಬ ಹೆಣ್ಣಿಗೂ ತಾಯಾಗಬೇಕೆಂಬ ಆಸೆ ಇರುತ್ತದೆ .ಆದರೆ ಗಂಡನಲ್ಲಿ ಸಮಸ್ಯೆ ಇದ್ದು ಮಕ್ಕಳಾಗದಿದ್ದರೂ ಅದನ್ನು ಹೆಣ್ಣಿಗೆ ಆರೋಪಿಸುತ್ತಾರೆ .ಉನ್ನತ ಸ್ಥಾನದಲ್ಲಿರುವ ಮಹಿಳೆಗೆ ಅಂಗರಕ್ಷಕರಿದ್ದರೆ ಜನಸಾಮಾನ್ಯ ಮಹಿಳೆ ಧೈರ್ಯದಿಂದ ಓಡಾಡುವುದೂ ಕಷ್ಟವಾಗುತ್ತಿದೆ .ಎಳೆಯ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವುದು ,ಕೊಲ್ಲುವುದು ,ಅಪಹರಿಸಿ ಮಾರುವುದು ದಿನ ನಿತ್ಯ ಪತ್ರಿಕರ ಓದುವಾಗ ಕಾಣ ಸಿಗುತ್ತದೆ .ಹದಿಹರೆಯದ ಹೆಣ್ಣು ಮಕ್ಕಳು ಒಂದಲ್ಲ ಒಂದು ರೀತಿಯಿಂದ ಮಾನಸಿಕ ,ಲೈಂಗಿಕ ಹಿಂಸೆ ಅನುಭವಿರುತ್ತಾರೆ .ಮುಜುಗರದಿಂದ ಕೆಲವೊಮ್ಮೆ ಮನಸ್ಸಲ್ಲೇ ಅದುಮಿಟ್ಟು ಆತ್ಮ ಹತ್ಯೆ ಮಾಡಿ ಕೊಳ್ಳುವುದೂ ಇದೆ .ಸ್ತ್ರೀವಾದಿಗಳು ಎಂದು ಹೇಳಿಕೊಳ್ಳುತ್ತಿರುವವರಿಗೆ, ಮಹಿಳಾ ಸಂಘಟನೆಗಳಿಗೆ ಗಮನಕ್ಕೆ ಬರುವುದು ಹೆಣ್ಣಿನ ಬದುಕಿನ ದುರಂತವಾದ ಕೊನೆಯ ಕ್ಷಣದಲ್ಲಿ .ಆದರೆ ಮೊದಲೇ ಆಕೆಗೆ ಜಾಗೃತಿಯ ಪಾಠ ಹೇಳಿ ಕೊಟ್ಟರೆ ಹೆಣ್ಣೊಬ್ಬಳು ಮಾನಸಿಕವಾಗಿ ಸಮಾಜಕ್ಕೆ  ತೆರೆದುಕೊಳ್ಳಬಲ್ಲಳು.                                                                                                                                                                   ಹೆಣ್ಣಿಗೆ ಆಧುನಿಕ ಸಮಾಜದಲ್ಲಿ ಸಹನೆಗಿಂತ ಬದುಕುವ  ರೀತಿ ಮುಖ್ಯ .ಆಕೆಗೆ ಯೋಗ್ಯ ರೀತಿಯ ಶಿಕ್ಷಣ ನೀಡುವುದರ ಜೊತೆಗೆ ಸಂಘಜೀವಿಯಾಗಿ ಬದುಕಲು ಕಲಿಸಬೇಕು .ತಂದೆ ತಾಯಂದಿರು ಗಂಡು ಮಕ್ಕಳಂತೆ ಹೆಣ್ಣು ಮಗಳನ್ನೂ ಪ್ರೀತಿಸಬೇಕು .ಅಣ್ಣ ತಮ್ಮಂದಿರ ಜೊತೆ ,ನೆರೆಕರೆಯ ಸಭ್ಯ ವ್ಯಕ್ತಿಗಳ ಜೊತೆ ,ಗೆಳೆಯ ,ಗೆಳತಿಯರ ಜೊತೆ ಬೆರೆಯುವಂತೆ ಅವಕಾಶ ಮಾಡಿಕೊಡಬೇಕು .ಆಗ ಆಕೆ ಮನಸ್ಸು ಬಿಚ್ಚಿ ಮಾತನಾಡಬಲ್ಲಳು .ಆಕೆಗೆ ಎಂದೂ ಮನೋದೌರ್ಬಲ್ಯ ಬರದು .ಉತ್ತಮ ಶಿಕ್ಷಣದ ಜೊತೆಗೆ ,ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಆಕೆಯ ಬಂಧುಗಳು ,ಪರಿಸರ ಒದಗಿಸಬೇಕು .ಹೆಣ್ಣೊಬ್ಬಳು ಶಕ್ತಿಯುತಳಾಗಿ ಯೋಚಿಸುತಿದ್ದರೆ ಭವ್ಯ ಭಾರತ   ಸಂಕಷ್ಟದಿಂದ ದೂರವಾದೀತು .

Friday 14 October 2011

ನಾಥ ಪಂಥದ ಜೋಗಿಗಳು /natha panthada jogigalu

  ನಾಥ ಪಂಥದ  ಜೋಗಿಗಳು /natha panthada jogigalu
       
                                     ನವನಾಥರು
        "ಆತ್ಮ ಯಾವ ಕುಲ ?,ಜೀವ ಯಾವ ಕುಲ?"; ಎಂದು ಪ್ರಶ್ನಿಸಿದ ಕನಕದಾಸರು ಸಮಾಜದ ಕ್ರಾಂತಿಗೆ ಕಾರಣರಾದರೆ ಅದನ್ನು ಪ್ರಶ್ನಿಸುವ ಅನಿವಾರ್ಯತೆ ಬಂದದ್ದು ಅವರು ಸಮಾಜದ ಕೆಳಸ್ತರ ಕುಲದಲ್ಲಿ ಜನಿಸಿದ್ದರಿಂದ .ಅಂತೆಯೇ ಸಮಾಜದಲ್ಲಿ ಬ್ರಾಹ್ಮಣ ,ಕ್ಷತ್ರಿಯ ,ವೈಶ್ಯ ಮತ್ತು ಶೂದ್ರ ಎಂದು ವೇದ ಕಾಲದಿಂದಲೂ ವರ್ಣಾಶ್ರಮ ವಿಂಗಡಣೆಯಿತ್ತು . ಪ್ರತಿಯೊಬ್ಬನೂ ಆಯಾ ಕುಲದ ,ಆಯಾ ವರ್ಣಾಶ್ರಮ ಧರ್ಮವನ್ನು ಪಾಲಿಸಬೇಕಿತ್ತು.ಒಂದು ವರ್ಣದವರ ಕೆಲಸವನ್ನು ಇನ್ನೊಂದು ವರ್ಣದವರು ಮಾಡುವಂತಿರಲಿಲ್ಲ . ಬಹಳ ಹಿಂದಿನಿಂದಲೂ ಶೈವರು ,ವೈಷ್ಣವರು ಎಂಬ ಎರಡು ಪಂಥಗಳು ಅಸ್ತಿತ್ವದಲ್ಲಿತ್ತು.
                  ಕಾನ್ ಫಟ್-ಕೆಬಿಟ್  ಕರ್ಣ ಕುಂಡಲ
                              ನಿವೃತ್ತಿ ನಾಥ್ ಹಾವೇರಿ

 .ವೈಷ್ಣವರು ವಿಷ್ಣುವಿನ ಆರಾಧಕರಾದರೆ ಶೈವರು ಶಿವನ ಆರಾಧಕರು . ಬ್ರಾಹ್ಮಣರು ವಿಷ್ಣುವನ್ನು ಪೂಜಿಸಿದರೆ ಶೈವರು ಶಿವನನ್ನೇ ದೇವರೆಂದು ನಂಬಿದವರು .ಪ್ರಪಂಚ,ಪಂಚಬೂತಾತ್ಮಕ ಪರಪಂಚ,ಪರಮಾತ್ಮ,ಪರಮ ಆತ್ಮ,ಪರಮೇಶ್ವರ,ಪರಮ ಈಶ್ವರ,ಪರ ದೈವ ಇಲ್ಲಿ ಇಹದಲ್ಲಿದ್ದುಕೊಂಡು ಪರದಲ್ಲಿರುವ ಆತ್ಮವನ್ನು ಆರಾದನೆ ಮಾಡುವುದು.ಶಿವ ಪಾರ್ವತಿಯರು ನೇರ ಸೃಷ್ಠಿ ಯ ನಿರಂತರ ಹರಿವಾದರೆ ಜ್ಞಾನದ ನಿರಂತರ ಚಲನೆಯ ರೂಪವೇ ಶಿವ,ಸೃಷ್ಟಿಸುವ,ಲಯವಾದುದನ್ನು ಮರು ಸೃಷ್ಟಿಸುವ ಸಾಮರ್ಥ್ಯವಿರುವುದು ಶಿವನಿಗೆ.ಎಲ್ಲವನ್ನೂ ಸುಡಬಹುದು.ಭಸ್ಮವನ್ನು ಸುಟ್ಟರೆ ಸಿಗುವುದು ಅದೇ ಭಸ್ಮ.ಯಾವುದನ್ನು ಸುಡಲಾಗುವುದಿಲ್ಲವೊ,ಸುಟ್ಟುದು ಅಂತಿಮವೋ ಅದೇ ಶಿವ. ಉತ್ತರ ಕರ್ನಾಟಕದಲ್ಲಿ ಶಿವಶರಣರು ಶಿವನ ಆರಾಧಕರದರೆ ,ಲಿಂಗಾಯತರು ಕೂಡ ಶಿವನನ್ನೇ ನಂಬಿದವರು .ಅವರವರ ನಂಬಿಕೆ ,ಆಚರಣೆಗಳು ಬೇರೆ ಬೇರೆಯಾದರೂ ಮೂಲ ಸೆಲೆಯೊಂದೆ,ಭಕ್ತಿ -ಪಾರಮಾರ್ಥ .ಭಾರತದಲ್ಲೂ ಶೈವರು ಅಧಿಕವಾಗಿದ್ದಾರೆ ಎಂಬುದಕ್ಕೆ ಜೋಗಿ -ಯೋಗಿ -ನಾಥ ಪಂಥದ ಸಂಪ್ರದಾಯದವರೇ ಸಾಕ್ಷಿ .ಉತ್ತರ ಭಾರತದಲ್ಲಿ ಅಧಿಕವಾಗಿರುವ ಶೈವರು ಮೂಲದಲ್ಲಿ ಹಿಂದಿ ಭಾಷಿಗರು .ನಿಜವಾಗಿ ಜೋಗಿ ಸಮಾಜದ ನಮ್ಮ ಮೂಲ ಭಾಷೆ ಹಿಂದಿ .ಮತ್ಸ್ಯೇನ್ದ್ರ  ನಾಥರ ಅನುಯಾಯಿಗಳಾದ ನಾವು ಸಸ್ಯಾಹಾರಿಗಳಾಗಬೇಕಿತ್ತು.ಆದರೆ ಸಮಾಜ ,ಬದಲಾವಣೆ ,ಪ್ರಾದೆಶಿಕತೆಗಳನ್ನೊಳಗೊಂಡು ಅಲ್ಲಿನ ಬದುಕಿಗೆನಾವು ಹೊಂದಿಕೊಳ್ಳಬೇಕಾಯಿತು .    
          

ಕುದುರೆ ಮೇಲೆ ಕುಳಿತ ಜೋಗಿ ಅರಸರು,ಕದಿರೆ ಜೋಗಿ ಮಠ.ಚಿತ್ರ-ಧರ್ಮದೈವ

 ನಮಗೂ ಉಣ್ಣೆಯ ಪವಿತ್ರ ಜನಿವಾರವಿದೆ .ಶಿವನ ಆರಾಧಕರಲ್ಲಿ ಲಿಂಗಾಯತರು ಆಯತ ಲಿಂಗವನ್ನು ಧರಿಸಿದ್ದರೆ ಜೋಗಿ ಸಮಾಜದವರು ಸಿಂಗ್ನಾತವನ್ನು ಧರಿಸುತ್ತಾರೆ .ನಮ್ಮಲ್ಲಿ ಹುಟ್ಟಿನಿಂದ ಹಿಡಿದು ಸಾವಿನವರೆಗಿನ ಆಚರಣೆಗಳು ಕೂಡಾ ವೈಷ್ಣವ ಸಂಪ್ರದಾಯಕ್ಕಿಂತ ಭಿನ್ನವಾಗಿರುತ್ತವೆ .ಪ್ರಾದೇಶಿಕ ಅನಿವಾರ್ಯತೆಯನ್ನು ಅರಿತುಕೊಂಡ ಜೋಗಿ ಜನಾಂಗ ತಮ್ಮ ವೃತ್ತಿಯನ್ನು ಅಲ್ಲಿಗನುಗುಣವಾಗಿ ಆರಿಸಿಕೊಂಡಿತು .ಜೋಗಿ -ಯೋಗಿ ಅಂದರೆ ಅಲೆಮಾರಿ ,ಜೋಳಿಗೆ ಹಾಕಿ ಸುತ್ತುವವ ,ಮುಂದೆ ಭಕ್ತಿಯ ಪಾರಮ್ಯತೆಯಿಂದ ಜೋಗಿ ತ್ಯಾಗಿಯಾಗಿ ಯೋಗಿಯಾಗಿ ಜೀವನವನ್ನು ಸವೆಸುವವ.       

                                ಮತ್ಸ್ಯೇಂದ್ರ ನಾಥೆರ್          

            ವೃತ್ತಿಧರ್ಮಕ್ಕನುಗುಣವಾಗಿ ನೋಡುವುದಾದರೆ ಮೂಲದಲ್ಲಿ ಜೋಗಿ ಜನಾಂಗ ಬಡವರಾಗಿದ್ದರು  .ಅವರ ಐಡೆಂಟಿಟಿ ಕಾಣಸಿಗುವುದು [ಅನನ್ಯತೆ ] ಹೆಚ್ಚಾಗಿ ದೈವಾರಾಧನೆಗಳಲ್ಲಿ .ವೈಷ್ಣವ ಪರಂಪರೆಯಿಂದ ದೈವಾರಾಧನೆ ಸಂಪೂರ್ಣ ನೆಲ ಕಚ್ಚುವ ಹಂತದಲ್ಲಿರುವಾಗ ತಂತ್ರ ಮಂತ್ರ ಪ್ರವೀಣರಾದ ಶೈವ ಜೋಗಿಗಳು ದೈವಾರಾಧನೆಯನ್ನು ಪುನರುಜ್ಜೀವನಗೊಳಿಸಿದರು . ಆ ಗೌರವದಿಂದ ಮೂಲ ದೈವ ನರ್ತಕರು ಸೋಣಂದ ಜೋಗಿ ,ಕಾವೇರಿ ಪುರುಷೆ ,ಮಾಯಿದ ಪುರುಷೆರ್ ,ಪುರುಷ ವೇಷ ,ಜೋಗಿ ಪುರುಸೆರ್ ಎಂದು ಆಷಾಢ ಮಾಸದಲ್ಲಿ ನೆನಪಿಸಿಕೊಳ್ಳುತ್ತಾರೆ . ಪುರುಷರು ಅಜಲು ಪದ್ಧತಿ ಪ್ರಕಾರ ತುಳುನಾಡಿನಲ್ಲಿ ದೈವದ ಉಂಬಳಿ ಭೂಮಿ ಪಡೆದು ಕೊಂಬು ವಾದ್ಯಗಳ ಮೂಲಕ ದೈವದ ಚಾಕಿರಿ ಮಾಡುತ್ತಾರೆ . ಅದು ಅವರ ಮೂಲ ವೃತ್ತಿಯಲ್ಲದ ಕಾರಣ ವರ್ಷಕ್ಕೊಮ್ಮೆ ಮಠಕ್ಕೆ ಹೋಗಿ ತಪ್ಪು ಕಾಣಿಕೆಯನ್ನು ಹಾಕುತ್ತಾರೆ ಜೋಗಿಯವರನ್ನು ಅವರ ವೃತ್ತಿಗನುಗುಣವಾಗಿ ವಾದ್ಯದವರು ,ಪುರುಷರು ,ಜೋಗಿಲು ,ಪುರ್ಸೆರ್ ಎಂದೆಲ್ಲ ಕರೆಯುತ್ತಾರೆ.  .ಇನ್ನು ಮುಂದೆ ಉಡುಪಿ ತಾಲೂಕಿನತ್ತ ತೆರಳಿದರೆ ಬಳೆಗಾರ ವೃತ್ತಿ ಮಾಡುವವರನ್ನು ಬಳೆಗಾರ ಜೋಗಿ ಎಂದು ಕರೆಯುತ್ತಾರೆ .ವೃತ್ತಿಗನುಗುಣವಾಗಿ ಹೆಸರುಗಳು ಬೇರೆ ಬೇರೆಯಾದಾರೂ ಅವರೆಲ್ಲರೂ ಜೋಗಿಗಳೇ. ಅಧುನಿಕ ಯುಗದಲ್ಲಿ ಜೋಗಿಗಳ ವೃತ್ತಿಧರ್ಮ ಅತ್ಯಂತ ಕಡಿಮೆಯಾಗತೊಡಗಿದೆ .ಸರಕಾರದಿಂದ ಹಿಂದುಳಿದ ವರ್ಗ ಎಂದು ಗುರುತಿಸಲ್ಪಟ್ಟ ಜೋಗಿ ಸಮಾಜ ಈಗ ಮುಂದುವರಿದ ಜನಾಂಗ ಎಂದು ಗುರುತಿಸಲ್ಪಟ್ಟಿದೆ .ಮುಂದುವರಿಯುತ್ತಿರುವ ಆಧುನಿಕತೆಗೆ ತಕ್ಕಂತೆ ಉನ್ನತ ಉದ್ಯೋಗದಲ್ಲಿ ನಮ್ಮ ಸಮಾಜ ಬಾಂಧವರಿದ್ದಾರೆ .ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಿರುವ ನಮ್ಮ  ಜೋಗಿ ಸಮಾಜದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರಂಥಹ ಅನೇಕ ರಾಜಕೀಯ ನೇತಾರರಿದ್ದಾರೆ,ಕದ್ರಿ ಗೋಪಾಲ ನಾಥರಂತಹ ಆಸ್ಥಾನ ವಿದ್ವಾಂಸರಿದ್ದಾರೆ,ಯಶು ವಿಟ್ಲ ರಂತಹ ಹಿರಿಯ ಪತ್ರಕರ್ತರಿದ್ದಾರೆ ,ಕಿರಣ್ ಜೋಗಿ ,ಪುರುಷೋತ್ತಮ್ ಜೋಗಿಯವರಂಥಹ ಸಂಘಟನಾ ಚತುರರಿದ್ದಾರೆ .          

          
17ನೇ ಶತಮಾನದ ನಾಥ ಪಂಥದ ಯೋಗಿಗಳ  ತೈಲ ಚಿತ್ರ                                                                                                                       ಪುರುಷ -ಅಂದರೆ ವ್ಯಕ್ತಿ ,ಪುರುಷ ಎಂದರೆ ಅಭಿವ್ಯಕ್ತಿ .ಆತನೇ ಜೋಗಿ ಸಮಾಜದ ಅನನ್ಯತೆಯ ನೇತಾರ .ಪುರುಷರು ಎಂದಾಗ ಕೀಳರಿಮೆ ಇಟ್ಟುಕೊಳ್ಳಬಾರದು .ಏಕೆಂದರೆ ಶೈವಾರಾಧನೆಯಲ್ಲಿ  ಜೋಗಿ ಎಂದರೆ ಅಲೆಮಾರಿ ಎಂದರ್ಥ .ಬ್ರಹ್ಮ ಕಪಾಲ ಹಿಡಿದ ಶಿವ ಜೋಗಿಯಲ್ಲವೇ ?.ಭಸಿತ ಲೇಪಿತ ,ಭಸ್ಮಾಂಗ ಶಿವ ಜೋಗಿಯೋಪಾದಿಯಲ್ಲಿ "ಯೋಗಿ "ಯಾದವನಲ್ಲವೇ ?.ಅರ್ಜುನನನ್ನು ಜೋಗಿ ಎನ್ನುವವರಿದ್ದಾರೆ . ಇದನ್ನೆಲ್ಲಾ ನಾವು ಅರಿತುಕೊಳ್ಳಬೇಕು ."ನಾಥ "ಎಂದರೆ ಒಡೆಯ .ನವನಾಥರು  ನಾಥ ಸಂಪ್ರದಾಯದ  ಪ್ರಮುಖರು. ಬಾರಹ್ಪಂತ (೧೨ ಜಾತಿ )ದವರು ನಾಥ ಪಂಥದಲ್ಲಿದ್ದಾರೆ.ಈಗ ನಮ್ಮ ಜೋಗಿ ಮಠದಲ್ಲಿ ಆಡಳಿತ  ನಡೆಸುವ ಹೆಚ್ಚಿನ ಯೋಗಿಗಳು ನಾಥ ಸಂಪ್ರದಾಯದವರೇ .ಅವರು ಸಹ ಜೋಗಿಗಳೇ .ಅವರೇನು ಬೇರೆಯವರಲ್ಲ .        
   
                                 ಗೋರಕ್ಷ ನಾಥರು     
     ನಮ್ಮಲ್ಲಿ ಗೊರಕ್ಷನಾಥರು ನಮ್ಮ ಗುರುಗಳು .ಗೋರಕ್ಷ ಅಂದರೆ ಗೋವುಗಳ ರಕ್ಷಕ ಅಂದರೆ ಕಾಮಧೆನುವಿನಂಶ ಎಂದರ್ಥ .ನಮ್ಮಲ್ಲಿ ಗೋವುಗಳಿಗೆ ಅತ್ಯಂತ ಪ್ರಾಧಾನ್ಯತೆ ಇದೆ .ಗೋವುಗಳೆಂದರೆ ೩೩ ಕೋಟಿ ದೇವರುಗಳ ಜೀವಂತ ದೇವಾಲಯ ಎನ್ನಬಹುದು .ಗೊರಕ್ಷನಾಥರನ್ನು ಶಿವನಂಶ ಎಂದು ಕರೆಯುವುದುಂಟು .ಬದರಿ ನಾಥರಂಥಹ ಮೌನಿ ಜಟಾಧಾರಿ,ಮತ್ಸ್ಯೆಂದ್ರ ನಾಥರಂತಹ ಯೋಗ ರೂವಾರಿ ನಮ್ಮಲ್ಲಿರುವಾಗ ಶೈವಾರಾಧನೆಯ ಮಹತ್ವ ನಮಗೆ ತಿಳಿಯುತ್ತದೆ .ಜೋಗಿ ಮಠದಲ್ಲಿ ೧೨ ವರ್ಷಗಳಿಗೊಮ್ಮೆ ಆಯ್ಕೆಯಾಗುವ ಗುರುಗಳು ಹೆಚ್ಚಾಗಿ ಶಿವನಂತೆ ಜಟಾಧಾರಿಗಳು.ಅವರು ಮೃಗ ಚರ್ಮದ ಮೇಲೆ ಕುಳಿತು ರುದ್ರಾಕ್ಷಿ ಹಿಡಿದು ಶಿವನನ್ನು ಧ್ಯಾನಿಸುತ್ತಿರುತ್ತಾರೆ.ಮೈಯೆಲ್ಲಾ ಭಸಿತ ಲೇಪಿಸಿ ಶಿವನ ಧ್ಯಾನದಲ್ಲಿರುತ್ತಾರೆ .ಪ್ರತಿಯೊಂದು ಮಠದಲ್ಲೂ ಕಾಶಿ ಕಾಲಭೈರವನ ಆರಾಧನೆ ನಡೆಯುತ್ತದೆ .ಮಠಗಳಲ್ಲಿ ಯುಗಾದಿ ಪೂಜೆ ಹೆಚ್ಹು ಪ್ರಸ್ತುತವಾಗಿರುತ್ತದೆ .ಗುರುವಿನ ಬಳಿ ಧೀಕ್ಷೆ ತೆಗೆದುಕೊಳ್ಳಬೇಕಾದರೆ ಕರ್ಣವೇದ ಸಂಸ್ಕಾರ  ಪಠಣ ಗುರುಗಳಿಂದಾಗುತ್ತದೆ.ಅಂತೆಯೇ ಕರ್ಣ ಭೇದ ಸಂಸ್ಕಾರವಾಗಿ ಕುಂಡಲಗಳನ್ನು ಕಿವಿಗೆ ಧರಿಸಬೇಕಾಗುತ್ತದೆ .      
        
                               ಸುಂದರ ನಾಥರು
                               ಹುಟ್ಟಿನಿಂದ ಹಿಡಿದು ಮದುವೆಯಿಂದ  ,ಸೀಮಂತದಿಂದ   ,ನಾಮಕರಣದಿಂದ ಎಲ್ಲವೂ ಲೋಕರೂಡಿಯಂತೆ ನಡೆದರೆ ಸಾವಿನಲ್ಲಿ ಶೈವಾರಾಧಕರಾದ ನಮ್ಮಲ್ಲಿ ವಿಶೇಷತೆಯಿದೆ .ಸಾವಿನ ಮನೆಗೆ ಹೋಗುವ ಶರೀರಕ್ಕೆ ಚಿನ್ನದ ನೀರು ಬಾಯಿಗೆ ನೀಡಿದರೆ ಶಿವಲಿಂಗವನ್ನು ಜೋಳಿಗೆಗೆ ಹಾಕುತ್ತಾರೆ .ಹೂಳುವಾಗ ದ್ಯಾನಕ್ಕೆ ಕೂತಂತೆ ಅಟ್ಟೆ ಹಾಕಿ ಕೂತುಕೊಲ್ಳಿಸಿ ಹಣೆಗೆ ನಾಮ ಹಾಕಿರುತ್ತಾರೆ .ಇದು ನಮ್ಮ ಸಂಪ್ರದಾಯ .ಜೋಗಿ -ಯೋಗಿಯಾಗಲಿ ,ಪುರುಷ -ಪುರುಷ ನಾಥನಾಗಲಿ ,ನಾಥ -ಸನ್ನಾಥ-ಜಗನ್ನಾಥನಾಗಲಿ ನಾವೆಲ್ಲರೂ ಒಂದೇ ,ಜೋಗಿ ಸಮಾಜ ಬಾಂದವರೆಂದೆ ಭಾವಿಸಬೇಕು .         
     
  12ವರ್ಷಗಳಿಗೊಮ್ಮೆ ಬರುವ ಜುಂಡಿ
            ನಾವು ಹಿರಿಯರಾಗಿದ್ದರೂ  ಕಿರಿಯತೆಯ ಭಾವನೆ ನಮ್ಮಲ್ಲಿದ್ದಾಗ ಮಾತ್ರ ಸರ್ವಜ್ಞ ಸಾಮಾನ್ಯನಾಗುತ್ತಾನೆ .ನಮ್ಮ ಸಮಾಜ ಬಾಂದವರನ್ನು ಒಗ್ಗೂಡಿಸುತ್ತಿರುವ ನಮ್ಮ ಭ್ರಾತೃತ್ವ ಪ್ರೇಮ ಸಮಾಜಕ್ಕೆ ಮಾದರಿಯಾಗಬೇಕು .ಯೋಗ್ಯ ಗುರುವಿನ ಗರಡಿಯಲ್ಲಿ ಪಳಗಿರುವ ನಮ್ಮ ಜೋಗಿ ಸಮಾಜ ಮದ್ಯಪಾನ ಮುಕ್ತ ಸಮಾಜವಾಗಬೇಕು .ಬಡತನ ಇರಬಹುದು .ಆದರೆ ಹೃದಯದಲ್ಲಿ ಬಡತನ ಇರಬಾರದು .ನಾವು ಹಣದಿಂದ ನಮ್ಮ ಜೋಗಿ ಸಮಾಜವನ್ನು ಅಳೆಯಬಾರದು .ಗುಣದಿಂದ ಅಳೆಯಬೇಕು  ".ಹಣ ಹೆಣದ ತನಕ -ಗುಣ ನೆನಪಿನ ತನಕ "-ಕಾವ್ಯಸುತರ ವಾಣಿಯಂತೆ ಗುಣವಂತರಾದ ಯೋಗ್ಯ ಜೋಗಿ ಸಮಾಜದ ನಿರ್ಮಾಣದಲ್ಲಿ ನಾವು ಭಾಗಿಗಲಾಗೋಣ ಎಂಬುದೇ ನನ್ನ ಆಶಯ 
ವೀಡಿಯೋ ಲಿಂಕ್-

Thursday 29 September 2011

ಬಂಜೆತನ ಹೆಣ್ಣಿಗೆ ಶಾಪವೇ?

              ಬಂಜೆತನ ಹೆಣ್ಣಿಗೆ ಶಾಪವೇ?
  

     ಹೆಣ್ಣಿಗೆ ಸಮಾಜದಲ್ಲಿ ಬದುಕಲು ಪುರುಷನಷ್ಟೇ ಸ್ವಾತಂತ್ರ್ಯದ ಹಕ್ಕಿದೆ ಎಂದರೂ ಅವಳಿಗದು ಪೂರ್ಣ ಪ್ರಮಾಣದಲ್ಲಿ ಇನ್ನೂ ಲಭಿಸಿಲ್ಲ.ಮದುವೆಯ ಆಯ್ಕೆ ಬಂದಾಗಲೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಭಾಗ್ಯ ನೂರರಲ್ಲಿ ಒಂದೆರಡು ಶೇಕಡಾ ಹೆಣ್ಣು ಮಕ್ಕಳಿಗೆ ಇರಬಹುದಷ್ಟೆ.ಕೆಲವೊಮ್ಮೆ ಧೈರ್ಯದಿಂದ ಮನೆಯಲ್ಲಿ ಧ್ವನಿಯೆತ್ತಲು ಪ್ರಯತ್ನಿಸಿದರೂ ಅವಳ ಬಾಯಿ ಮುಚ್ಚಿಸುವವರೇ ಜಾಸ್ತಿ.ಮುಸ್ಸಂಜೆಯ ಬಳಿಕ ಹೆಣ್ಣೊಬ್ಬಳು ರಸ್ತೆಯಲ್ಲಿ ನಡೆದಾಡಲು ಹೆದರುತ್ತಾಳೆ ಎಂದರೆ ಎಲ್ಲಿ ಆಕೆಯ ಬದುಕಿಗೆ ಭದ್ರತೆ ದೊರಕಿದೆ?. ಹೆಣ್ಣೊಬ್ಬಳು ರಬ್ಬರಿನ ದಾರದಂತೆ ಆಕೆಯನ್ನು ಹೇಗೆ ಎಳೆದರೂ ಮತ್ತೆ ಸಂಕುಚಿತಗೊಳ್ಳುತ್ತಾಳೆ‌.ಹಾಗಾಗಿಯೇ ಪುರುಷ ಪ್ರಧಾನ ವ್ಯವಸ್ಥೆ ಆಕೆಯನ್ನು ಹೊಗಳಿ ಹೊನ್ನ ಶೂಲಕ್ಕೇರಿಸುವ ಮೂಲಕ ಸಂಕುಚಿತ ಮನೋಭಾವದಿಂದ ಆಕೆಯನ್ನು ನೋಡುವುದು ರೂಢಿಯಾಗಿ ಬಿಟ್ಟಿದೆ.ಉದ್ಯೋಗದ ಆಯ್ಕೆ ಮಾಡುವಾಗಲೂ ಮಗನ ಮತ್ತು ಮಗಳನ್ನು ಉದ್ಯೋಗಕ್ಕೆ ಸೇರಿಸುವಲ್ಲಿ ಕೆಲವೊಂದು ಚೌಕಟ್ಟುಗಳನ್ನು ಹಾಕುವವರೂ ಇದ್ದಾರೆ.ವಿದ್ಯಾಬ್ಯಾಸದ ಸಂದರ್ಭದಲ್ಲಿ ನೀನು ಓದಿ ಏನು ಸಾಧನೆ ಮಾಡುವುದಿದೆ,ಎಷ್ಟಾದರೂ ಅಡುಗೆ ಮನೆಯೇ ನಿನ್ನ ಸರ್ವಸ್ವ ಎನ್ನುವವರೂ ಇದ್ದಾರೆ.ಗಂಡು ಹೊರ ಹೋಗಿ ಕೆಲಸ ಮಾಡಿ ರಾತ್ರಿ ಬಂದರೂ ಕೇಳದವರು ಹೆಣ್ಣು ಮನೆಗೆ ಬರುವಾಗ ಸ್ವಲ್ಪ ತಡವಾದರೂ ಚಡಪಡಿಸುತ್ತಾರೆ.ಮದುವೆಯಾದ ಮೆಲೆ ಗಂಡ ಮನೆಯಲ್ಲಿದ್ದು ಹೆಂಡತಿ ಉದ್ಯೊಗದಲ್ಲಿದ್ದರೆ ಅವಳು ಮನೆ ಸೇರುವುದು ತಡವಾದರೆ ಅವಳ ನಡತೆಯ ಬಗೆಗೆ ಪ್ರಸ್ನಿಸುವವರೇ ತುಂಬಿಹೋಗಿದ್ದಾರೆ .ಒಬ್ಬಾಕೆ ಸ್ತ್ರೀಯನ್ನು ಯಾವುದೋ ಒಂದು ರೀತಿಯಿಂದ ತನ್ನ ಬಲೆಗೆ ಬೀಳಿಸಿ  ಆಕೆಯನ್ನು ದೈಹಿಕವಾಗಿ ಬಳಸಿ ಮುಂದೆ ಆಕೆಗೆ ಹಣದ ಆಮಿಷವೊಡ್ಡಿ ತಮ್ಮ ಗೆಳೆಯರಿಗೆ ಆಕೆಯನ್ನು ಬಲವಂತವಾಗಿ ಕೊಟ್ಟು ಕೊನೆಗೆ  ಆಕೆಗೆ ಕೊಡುವ ಬಿರುದು ವ್ಯಭಿಚಾರಿಯೆಂದು. ಇದು ಅವಳಾಗಿಯೇ ಮಾಡಿಕೊಂಡ ವ್ಯವಸ್ಥೆಯಲ್ಲ .ಪುರುಷ ಪ್ರಧಾನ ವ್ಯವಸ್ಥೆ ಆಕೆಯನ್ನು ನಂಬಿಸಿ ತನ್ನ ಬಲೆಗೆ ಬೀಳಿಸಿದ ಪರಿಯಿದು.ಇದರಲ್ಲಿ ಪರಿತಪಿಸುವುದು ಹೆಣ್ಣುಮಕ್ಕಳು.ಯಾವುದೇ ಕಡಿಮೆ ಉಡುಗೆ ತೊಡುಗೆ ತೊಟ್ಟ ಹೆಣ್ಣು ಮಕ್ಕಳಿಗಿಂತ ಸಂಪೂರ್ಣ ಮೈಮುಚ್ಚಿಕೊಂಡವರೆ ಕಾಮುಕರ ಬಲೆಗೆ ಬಿದ್ದು ಜೀವಂತ ಶವವಾಗಿರುವುದು.ಹಾಗಾಗದಂತೆ ಹೆಣ್ಣೊಬ್ಬಳು ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಎಚ್ಚರ ವಹಿಸಬೇಕಾದದ್ದು ಅನಿವಾರ್ಯ .ಯಾವ ಕ್ಷೇತ್ರದಲ್ಲೂ ಆಕೆ ಗಂಡಿಗಿಂತ ಕಡಿಮೆಯಿಲ್ಲ .ಆದರೆ ಪ್ರೀತಿಯ  ಭಾವನೆಯ ಸಂಕೋಲೆಯಲ್ಲಿ ಹಿಂದು ಮುಂದು ನೋಡದೆ ಮೈ ಮನಗಳನ್ನು ನೀಡಿ ಅಪಾಯಕ್ಕೆ ಸಿಲುಕಿಕೊಳ್ಳುವವಳು ಅವಳೇ.                                      ಹೀಗೆಲ್ಲ ಯಾತನೆಗಳನ್ನು ಅನುಭವಿಸಿರುವ ಹೆಣ್ಣಿಗೆ ಒಂದೊಮ್ಮೆ ಬಂಜೆತನವೂ ಬದುಕಲ್ಲಿ  ಕಾಡುವುದುಂಟು.ಕೆಲವೊಮ್ಮೆ ಬಂಜೆತನ ಆಕೆಯಲ್ಲಿದ್ದರೆ ಆಕೆಯನ್ನು ಯಾವುದಕ್ಕೂ ಉಪೊಗಕ್ಕಿಲ್ಲದವಳೆಂದು ಭಾವಿಸುವವರೇ ಜಾಸ್ತಿ .ಹೆಣ್ಣಿನಲ್ಲಿ ಯಾವುದೇ ದೋಷ ಇಲ್ಲದಿದ್ದರೂ ಗಂಡಿನಲ್ಲಿ ನ್ಯೂನತೆಯಿದ್ದರೂ ನೋವು,ಸಂಕಟ ,ಅಪಮಾನ ಎದುರಿಸುವವಳು ಹೆಣ್ಣೇ .ಮದುವೆಯಾಗಿ ಕೆಲವರು  ಮೋಜಿಗಾಗಿ ಮಕ್ಕಳು ಸ್ವಲ್ಪ ನಿಧಾನ ಆಗಲಿ ಎಂದು ಅಸಡ್ಡೆ ಮಾಡ್ತಾರೆ.ಕೆಲವೊಮ್ಮೆ ಹೆಣ್ಣು ಗರ್ಭ ಧರಿಸಿದರೂ ಅವಳ ಗಂಡ ಮಗು ಈಗ ಬೇಡವೆಂದು ಹೇಳಿ ಬ್ರೂಣವನ್ನೇ ತೆಗೆಸುವುದೂ ಉಂಟು .ಕೆಲವೊಮ್ಮೆ ಲೋಕದ ದೃಷ್ಟಿಗೆ ಆತನಿಗೆ ಹೆಂಡತಿ ಹೆಸರಿಗೆ ಮಾತ್ರ ಇದ್ದು ಆತನಿಗೆ ಬೇರೆ ಹೆಣ್ಣಿನ ಸಂಪರ್ಕ ಇರುವುದೂ ಉಂಟು .ಅದನ್ನೂ ಪ್ರಸ್ನಿಸದೆ,ಸಮಾಜಕ್ಕೆ ಹೆದರಿ  ಮದುವೆಯಾದ ತಪ್ಪಿಗೆ ಇದನ್ನೆಲ್ಲಾ ಸಹಿಸಿಕೊಂಡು ಜೀವನ ಸವೆಸುವ ಹೆಣ್ಣು ಮಕ್ಕಳೂ ಇದ್ದಾರೆ. ಗಂಡಸರು ಹೊರಗಡೆ ಹೆಚ್ಹಾಗಿ ದುಡಿಯುತ್ತಿರುತ್ತಾರೆ.ಮದುವೆಯಾದ ಹೆಣ್ಣು ಮಕ್ಕಳು ಹೆಚ್ಹಾಗಿ ಮನೆಯಲ್ಲಿರುತ್ತಾರೆ.ಕೆಲವೊಮ್ಮೆ ಅತ್ತೆಯ ಸ್ಥಾನದಲ್ಲಿರುವ ಹೆಣ್ಣಿಗೆ ಎಲ್ಲವನ್ನೂ ತೊರೆದು ಗಂಡನ ಮನೆಯೇ ಸರ್ವಸ್ವವೆಂದು ನಂಬಿ ಬಂದ  ಹೆಣ್ಣಿನ ನೋವು ,ಸಂಕಟ ತಿಳಿಯದೆ ಸೊಸೆಗೆ ಹಿಂಸೆ ಕೊಡುವುದೂ ಇದೆ .ಮದುವೆಯಾಗಿ ಒಂದೆರಡು ವರ್ಷ ಮಕ್ಕಳು ಅಗದೆ ಆಕೆ ಬದುಕು ಕಳೆದರೆ ಸಾಕು ಮದುವೆಗೆ ಹೋದಲ್ಲಿ ಬಂದಲ್ಲಿ ಹೆಂಗಸರು,  "ಮದುವೆಯಾಗಿ ಎರಡು ವರ್ಷವಾದರು ಏನು ಹೊಟ್ಟೆಯಲ್ಲಿ ಒಂದು ಮಗು ಯಾಕೆ ಹುಟ್ಲಿಲ್ಲ ,ಏನು ಕತೆ ? "ಎಂದೆಲ್ಲ ಪ್ರಶ್ನಿಸಲು ಶುರು ಮಾಡ್ತಾರೆ ಆಗ ಆ ಹೆಣ್ಣಿನ ಸಂಕಟ ಎಷ್ಟಿರಬಹುದು ನೀವೇ ಊಹಿಸಿ .ವೈದ್ಯರಲ್ಲಿ ಹೋದಾಗ  ಮಗು ಆಗಲು ಹೆಣ್ಣಿಗೆ ತೊಂದರೆ  ಇಲ್ಲ  ಗಂಡನದೆ ತೊಂದರೆ ಎಂದು ತಿಳಿದರೂ ಆ ಹೆಣ್ಣು ಮಗಳು  ಯಾರಲ್ಲೂ ಏನನ್ನೂ ಬಾಯಿ ಬಿಡದೆ ನೋವನ್ನು ಮನದಲ್ಲೆ ಅದುಮಿಟ್ಟುಕೊಂಡಿರುತ್ತಾಳೆ.ಆಕೆಗೆ ಆತನ ಶ್ರೇಯಸ್ಸು ಮುಖ್ಯ .ಆದ್ರೆ ತನ್ನಲ್ಲಿ ಕೊರತೆಯಿದ್ದರೂ ತನ್ನ‌ ಹೆಂಡತಿಯಲ್ಲಿ ನ್ಯೂನತೆ ಇಲ್ಲದಿದ್ದರೂ ಅತ ಸರಿಯಾಗಿ ಅಕೆಯನ್ನು ಅರ್ಥ ಮಾಡಿಕೊಳ್ಳದೆ .ತನ್ನ ಗೆಳೆಯರಲ್ಲಿ " ಆಕೆ ಗೊಡ್ಡು  ಮಾರಾಯ ,ಯಾಕಾದ್ರೂ ಆಕೆಯನ್ನು ಮದುವೆಯಾದ್ನೋ " ಎಂದೆಲ್ಲಾ ಹೀಯಾಳಿಸುತ್ತಾನೆ.ಎಲ್ಲರೂ ಆಕೆಯನ್ನು "ನೀನು ಬಂಜೆ "ಎಂದು ಹೀಯಾಳಿಸಿದರೆ ತನ್ನದಲ್ಲದ ತಪ್ಪಿಗೆ ಆಕೆ ಹರಕೆಯ ಕುರಿಯಂತಾಗುವುದು ದುರಂತ .                                                               ಹೀಗಾದಾಗ ಕೆಲವೊಮ್ಮೆ ಆಕೆ ಮಾನಸಿಕ ಖಿನ್ನತೆಯಿಂದ ಬೇರೆಯವರ ಮಕ್ಕಳನ್ನು ನೋಡುವಾಗ  ಸಿಟ್ಟಾಗುವುದೂ ಇದೆ .ಕೆಲವೊಮ್ಮೆ ಅವಳ ಗೆಳತಿಯರು ತಾವು ಹೆತ್ತ ಮಕ್ಕಳನ್ನು ಮುತ್ತಿಟ್ಟು ಮುದ್ದಾಡುವಾಗ ಮನದೊಳಗೆ ನೋವನುಭವಿಸಿ ಕಣ್ಣೀರಿಡುವುದುಂಟು .ಮಾನಸಿಕವಾಗಿ ಕಿರಿಕಿರಿಯಾಗಿ ತನ್ನ ತಾಳ್ಮೆಯ ಕಟ್ಟೆಯೊಡೆದಾಗ ಹುಚ್ಚಿಯಂತೆ ವರ್ತಿಸುವುದೂ ಉಂಟು. .ಕೆಲವೊಮ್ಮೆ ನನ್ನಿಂದ ಯಾರಿಗೂ ಏನೂ ಪ್ರಯೋಜನ ಇಲ್ಲವೆಂಬ ಭಾವನೆ ಆಕೆಯಲ್ಲಿ ಮೂಡಿದಾಗ ಆಕೆ ಆತ್ಮ ಹತ್ಯೆಗೂ ಶರಣಾಗುವುದುಂಟು.ಹಾಗಾಗದಂತೆ ತಡೆಯಲು ಆಕೆಯ ಬದುಕಿನ ಸುತ್ತ ಮುತ್ತಲಿರುವ ಸ್ನೇಹಿತರು,ಬಂದು ಬಳಗದವರು ಆಕೆಯ ಮಾನಸಿಕ ನೋವನ್ನು ದೂರವಿರಿಸಲು ಮಾನವೀಯ ನೆಲೆಯಿಂದ ಪ್ರಯತ್ನಿಸಬೇಕು .ಹೆಣ್ಣಿಗೆ ಆದಷ್ಟು ತಾಳ್ಮೆಯ ಪಾಠವನ್ನು ನೀಡುವ ಮೂಲಕ ಆಕೆಯಲ್ಲಿ ಆತ್ಮಸ್ಥೈರ್ಯ ಮೂಡುವಂತೆ ಮಾಡಬೇಕು.ನೊಂದ ಒಡಲಿಗೆ ಮತ್ತೂ ನೋವನ್ನು ನೀಡದೆ ಆಕೆಗೆ ಸಾಂತ್ವಾನ ನೀಡಿ,ಧೈರ್ಯ ತುಂಬಿ ಸಮಾಜದಲ್ಲಿ ಬದುಕುವ ಅವಕಾಶ ಕೊಡಬೇಕು .ಇಲ್ಲಿ ಆಕೆಗೆ ಸಮಾಜಕ್ಕಿಂತ ಗಂಡನ ಪ್ರೀತಿ ,ನೈತಿಕ ಬಲ,ಮನೆಯವರ ಪ್ರೀತಿ ಮುಖ್ಯವಾಗುತದೆ .                                             ಶಾರೀರಕವಾಗಿ ಗಂಡು ಹೆಣ್ಣಿನ ನಡುವೆ ವ್ಯತ್ಯಾಸವಗಳಿದ್ದರೂ ಮನೋ ಬಾವನೆಗಳು ಗಂಡು ಹೆಣ್ಣಿನಲ್ಲಿ ಸಮಾನವಾಗಿರುತ್ತವೆ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ, ಹೆರುವ ಯಂತ್ರವಾಗಿ ನೋಡದೆ ಅಕೆಗೂ ಒಂದು ಮನಸ್ಸಿದೆ,ಆಕೆಯಲ್ಲೂ  ಭಾವನೆಗಳಿವೆ ಎಂಬುದನ್ನು ಅರ್ಥವಿಸಿ ನೋಡಿದಾಗ  ಆಕೆಗೆ ಗಂಡನೇ ಮಗುವಾಗುತ್ತಾನೆ ,ಗಂಡನಿಗೆ ಆಕೆ ಮಗುವಾಗುತ್ತಾಳೆ .ಆಗ ಅವರಿಬ್ಬರ ನಡುವೆ ವಿರಸ ಬರದು .ಶೂನ್ಯದಲ್ಲಿ ಹತಾಶೆ ಹುಟ್ಟಿಕೊಳ್ಳುವುದು , ಅಗಲೇ ಬದುಕಿನಿಂದ ಅಕೆ ವಿಮುಖಳಾಗಲು ಪ್ರಯತ್ನಿಸುವುದು. .ಹಾಗಾಗದಂತೆ
ಆಕೆಯನ್ನು ಉದ್ಯೋಗಕ್ಕೆ ಸೇರಿಸಿದಾಗ ಹೊಸ ವಾತಾವರಣದಲ್ಲಿ ಆಕೆ ಸ್ವಲ್ಪ ಚೆತರಿಸಿಕೊಳ್ಳುತಾಳೆ .ಮದುವೆಯಾಗಿ ಬಹಳಷ್ಟು ವರ್ಷಗಳಾದರೂ ಮಗುವಾಗದ ಹೆಣ್ಣೊಬ್ಬಳು ಮನೆ ಮುಂದೆ ಕುಳಿತಿದ್ದಾಗ ಭಿಕ್ಷುಕಿಯೊಬ್ಬಳು ಅಮ್ಮಾ ಎಂದು ಕರೆದಾಗ ಆಕೆಗಾಗುವ ಸಂತೋಷ ಅಷ್ಟಿಷ್ಟಲ್ಲ.ಅಮ್ಮಾಎಂಬ ಪದದ ಆಳವೇ ಅಷ್ಟು.ಹೆಣ್ಣೊಬ್ಬಳು ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ತಾಯಿಯೆಂಬ ಪದಕ್ಕೆ ಪರಿಪೂರ್ಣತೆಯನ್ನು ಆಕೆ ಪಡೆಯುತ್ತಾಳಲ್ಲದೆ ಬಂಜೆ ಎನ್ನುವ ನೋವಿನಿಂದ ಮುಕ್ತಿ ಪಡೆಯಬಹುದು .ಒಟ್ಟಿನಲ್ಲಿ "ಯತ್ರ  ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹ " ಎನ್ನುವಂತೆ ಹೆಣ್ಣನ್ನು ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .

   




  
 hare 

Friday 16 September 2011

ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ್ಯಾಕೆ ಸಿಗುವುದಿಲ್ಲ

ವೃತ್ತ ಪತ್ರಿಕೆಗಳನ್ನು ತೆಗೆದು ಓದುವಾಗ ಪ್ರತಿ ದಿನವೂ ಮೂರು ನಾಲ್ಕು ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ ಎಂಬ ಫೋಟೋ ಬರುತ್ತದೆ .ಆದರೆ ಆ ಹೆಣ್ಣು ಮಕ್ಕಳು ಎಲ್ಲಿ ಹೋದರು ,ಏನಾದರೂ ಎಂಬ ಬಗ್ಗೆ ಸುಳಿವೇ ಸಿಗುವುದಿಲ್ಲ .ಪೊಲೀಸರು ಕೂಡ ಕೈಕಟ್ಟಿ ಕುಳಿತಿರುವಂತೆ ಕಾಣುತಿದೆ .ಕೆಲವರು ಆತ್ಮಹತ್ಯೆ ಮಾಡಿದ್ದಾರೆ ಎಂದು ಸ್ವಲ್ಪ ಸಮಯದ ನಂತರ ವರದಿ ಬರುತದೆ .ನಿಜವಾಗಿ ಆ ಹುಡುಗಿ ಆತ್ಮಹತ್ಯೆ ಮಾಡಿದೆಯಾ ಅಥವಾ ಅಂತ ಪ್ರಸಂಗವನ್ನು ಪುರುಷ ಪ್ರಧಾನ ವ್ಯವಸ್ಥೆ ಆಕೆಯ ಮೇಲೆ ಹೇರಿದೆಯ ಎಂಬುದು ತಿಳಿಯುವುದಿಲ್ಲ .       
     
                                                                                                           ಹೆಚ್ಹಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಕೆಲಸಕ್ಕೆ ,ಕಾಲೇಜಿಗೆ  ಪಟ್ಟಣದ ಕಡೆ ಹೋಗುತ್ತಾರೆ .ಕೆಲವೊಮ್ಮೆ ಈ ಮುಗ್ಧ ಹುಡುಗಿಯರು ಗಂಡಿನ ಬಲೆಗೆ ಸಿಳುಕುವುದಿದೆ .ಮನೆಯಲ್ಲಿ ಕಿತ್ತು ತಿನ್ನುವ ಬಡತನ ,ಕುಡುಕ ಅಪ್ಪನ ಪೆಟ್ಟು  ಇದರಿಂದ ಪಾರಾಗಬೇಕೆಂದು ಕೆಲಸಕ್ಕೆ ಸೇರಿದರೆ ಅವಳಿಗರಿವಿಲ್ಲದಂತೆ ಅಪರಿಚಿತನ ಪರಿಚಯ .ಅಲ್ಲಿ ಆಕೆ ತನಗೆ ಪ್ರೀತಿ ದೊರೆಯಿತೆಂದು  ನಂಬಿ ತನ್ನನ್ನು ಆತನಿಗೆ ಅರ್ಪಿಸಿ ಬಿಡುತ್ತಾಳೆ .ಅವ ಮುಂದೆ ಎಲ್ಲಿ ಹೋದ ಎಂದು ತಿಳಿಯದಾದಾಗ ಗೊಂದಲಕ್ಕೊಳಗಾಗುತ್ತಾಳೆ. ಆದರೆ ಕಾಲ ಕಳೆದಾಗಿರುತ್ತದೆ .ಒಂದೆಡೆ ಯಾರಲ್ಲೂ ಹೇಳಲಾರದ ಪರಿಸ್ಥಿತಿ .ಆವಾಗ ಆಕೆ ಆಯ್ಕೆ ಮಾಡೋದು ಸಾವನ್ನು .ಹೀಗಾಗಲು ಕಾರಣ ನಮ್ಮ ಪುರುಷ ಪ್ರಧಾನ ಸಮಾಜ .ಒಂದು ಹೆಣ್ಣನ್ನು ಬಲೆಬೀಸಿ ಹಿಡಿಯಲು ಹುಡುಗರು ಅವಳ ದೌರ್ಬಲ್ಯವನ್ನು ಮೊದಲು ತಿಳಿಯುತ್ತಾರೆ .ಆಕೆಗೆ ಮೊಬೈಲ್ ಕೊಡಿಸೋದು ,ಅಕೆಗೆ ಇಷ್ಟವಾದ ಸೀರೆ ,ಚೂಡಿದಾರ ಕೊಡಿಸೋದು ,ಒಂದೆರಡು ಸಿನೆಮಾ ತೋರಿಸೋದು ,ಮುಂದೆ ಆಕೆ ತನ್ನತ್ತ ವಾಲುತ್ತಾಳೆ ಎಂದು ಗೊತ್ತಾದಾಗ  ತನ್ನ ಬೇಳೆ ಬೇಯಿಸಿಕೊಳ್ಳೋದು ,ಮುಂದೆ ಅವಳಿಗರಿವಿಲ್ಲದಂತೆ ಪಾನೀಯದಲ್ಲಿ ಅಮಲು ಪದಾರ್ಥ ಸೇರಿಸಿ ಆಕೆಯನ್ನು ಗಲ್ಲಿಗೊಯ್ಯುವುದು ಕಾಣಸಿಗುತ್ತದೆ .ಈ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದ್ದರೂ ನ್ಯಾಯಾಂಗ ಕೈಕಟ್ಟಿ ಕೂತಿರೋದು ದುರದೃಷ್ಟಕರ.                                                               ಹೆಣ್ಣುಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಡ ತರಗತಿಗಳಲ್ಲಿ ಸೆಕ್ಸ್ ನ ಬಗ್ಗೆ ,ಅದರಿಂದಾಗುವ ತೊಂದರೆಯ ಬಗ್ಗೆ ಗುರುಗಳು ಹಾಗೂ ತಂದೆ ತಾಯಂದಿರು ಶಿಕ್ಷಣ ನೀಡಬೇಕು .ಆಗ ಸ್ವಲ್ಪ ಮಟ್ಟಿಗೆ ಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳುತ್ತಾರೆ .ಕೆಲಸಕ್ಕೆ ಅದರಲ್ಲೂ ಪಟ್ಟಣಕ್ಕೆ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳು ಪ್ರೀತಿಯ ನಾಟಕವಾಡುವ ಹುಡುಗರ ಬೂಟಾಟಿಕೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು .ಯಾವುದೇ ಅಪರಿಚಿತ ಸಭ್ಯನಲ್ಲದ ಸಭ್ಯನಂತೆ ನಟಿಸುವ ವ್ಯಕ್ತಿಯಿಂದ ದೂರವಿರಬೇಕು .ಪದೇ ಪದೇ  ಒಬ್ಬ ವ್ಯಕ್ತಿ ತಮಗೆ ಹಿಂಸೆ ನೀಡುತ್ತಿದ್ದರೆ ಅರಕ್ಷರಿಗೆ ತಿಳಿಸಿ ಇಲ್ಲವೇ ಮಹಿಳಾ ಸಂಘಟನೆಗೆ ತಿಳಿಸಿ .ಕಾನೂನಿನಲ್ಲಿ ಎಲ್ಲರೂ ಸಮಾನರೆ .ಯಾವ ರಾಜಕೀಯ ಪುಡಾರಿಯ ಭಯವೂ ನಿಮಗೆ ಬೇಡ .ಹೆಣ್ಣು ಮಕ್ಕಳೇ ಸಮಾಜದಲ್ಲಿ ನಿಮ್ಮದೇ ಆದ ಚೌಕಟ್ಟಿನಲ್ಲಿ ಬದುಕುವ ಸ್ವಾತಂತ್ರ್ಯ ನಿಮಗಿದೆ .ನೀವು ಮೊದಲು ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ .ಪೊಳ್ಳು ಬೆದರಿಕೆಗೆ ಭಯ ಪಡಬೇಡಿ .ನೀವು ಅಂಜದೆ ಅಳುಕದೆ ದಿಟ್ಟೆಯಾಗಿ ನಿಂತರೆ ನಿಮ್ಮನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ . ಇನ್ನು ಪೊಲೀಸರು  ವೇಶ್ಯಾವಾಟಿಕೆಯ ಬಲೆಗೆ ಬಿದ್ದಿರುವ ಹೆಣ್ಣು ಮಕ್ಕಳನ್ನು ರಕ್ಷಿಸುವ  ಹೊಣೆ ಹೊರಬೇಕು .ವೇಶ್ಯಾ ಗೃಹಗಳನ್ನು ,ವೇಶ್ಯಾ ವೃತ್ತಿಗೆ ಪ್ರಚೋದಿಸುವವರನ್ನು ಉಗ್ರವಾಗಿ ಶಿಕ್ಷಿಸಬೇಕು .ಕಾನೂನಿನಲ್ಲೂ ವೇಶ್ಯಾವಾಟಿಕೆಗೆ ಹೆಣ್ಣು ಮಕ್ಕಳನ್ನು ದನ ಸಾಗಿಸುವಂತೆ ಸಾಗಿಸುವವರನ್ನು ಉಗ್ರವಾಗಿ ಶಿಕ್ಷಿಸಬೇಕು. ಕರಾವಳಿಯ ಹೆಣ್ಣು ಮಕ್ಕಳು ನಿಜಕ್ಕೂ ಮುಗ್ಧೆಯರು .ಅವರನ್ನು ಇಂಥ ಸಂಧಿಗ್ಧ ಪರಿಸ್ಥಿತಿಗೆ ಹೋಗದಂತೆ  ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ .                                                                            

Monday 5 September 2011

ಭೃಷ್ಟಾಚಾರ ಭಾರತದಿಂದ ತೊಲಗೀತೇ

Bhrastachara... ee shabdada vyuthpathiyalle adara aala yeshtu , harahu yeshtu ,harivu yeshtu yembudu thiliyuthade .obba kettaddannu madidare ' chi bhrashta 'yennutheve .bhrashta+chara (ketta dariyalli nadeyuvavanu )athava bhrastathanavanne aacharavannagi roodisikondavanu yendaguthade .lancha, mancha, kaviya kuncha,khakiya hancha(chavani)adiyalli nadevakhadiya swechachara bhrashtacharada paramavadhiye sari.bhrashtacharada beeja manthrave lancha.illindale ondondu kondi beledukondu hemmaravagi samajavannu aa moolaka vyakthithvada manaveeya moulyagalannu kalachisuthaa hogi deshavannu kaggathala koopakke thalluvudu. intha samayadalli pramanikavagi bhrashtacharatheyannu tholagisalu nyaayamoorthi santhoshhegdeyavaru prayathnapattaru. prajaprabhuthvada deshadalli obba samanyathisamanya vyakthiya karthavya nishtege anna munnudiyadaru .thanna ilivayassinalli arogyavannoo lekkisade yuvakarannu huridumbisutha bhrashtachara nivaranege panathotta annaa hajare yuvakara palina diggajane .english medium school seatninda hididu,R.T.O., POLICE CHECKPOSTninda hididu,panchayath gumastha,secratory yinda hididu,p.w.d engineerninda hididu manya shasakaru sachivopadiyagi ondalla ondu reethiyinda lancha sweekarisuvavare.sanna sanna ilakheya vyakthigala bangalegale lakshantharaddiruvaga dodda dodda heggana adhikarigala bangale kotigattaleyaddu . kevala sambalada hanadinda idannu madalu sadhyave? .khanditha illa.udyogakke seruvagalu, medical seat padeyuvagalu lakshagattale hana suridiruva vyakthigalu adannu vasoolu maduvudu janasamanyarinda.avarigenu gothu janasamanyara hasivu?.lokayuktharu allalli dali madi adhikarigalannu bhandisiddara bagge pathrikeyalli allalli kanasiguthade .munde avarigenaythu yemba sulive namage siguvudilla.heegiruvaga hege bhrashtacharaa tholageethu yendu navu nambuvudu?.nodi bhrashtachara thadeyalu banda adhikarigala mele yenannadaru goobe kooristhare. adre bhrashtacharavemba maleriavannu deshadinda horagattalu yuva shakthi yemba vacsin agathyavide .aa vacsinannu nyayamoorti santhosh hegde,anna hajareyavaru kandu hidididdare.adara prayojana sadyadalle namage sigabahudu.varadakshine koduvudu,thegedukolluvudu thappendu gothiddaru hiriya adhikarigale makkala maduve maduvaga laksha laksha suriyuthare . idu saha lancha,bhrashtacharada sarahaddinalle baruthade.lancha padakonda rajakaranigala hagoo kotta adhikarigalannu bhandisuthiruvudu t.v nalli kaanisuthide.innadar lancha koduvudannu,thegedukolluvudannu nillisi .horadeshadalli gowpyavagittiruva hana bharathakke haridu bandare horadeshagalallina nammasala theereethu.ee nittinalli madhyamapremigalu,vidhyarthigalu,yuva jananga yechethukollabekagide.lancha padevavarannu, lancha koduvavarannu guruthisi nyaya thakkadigoppisi.aaga namma deshadinda " bhrastachara bharathadinda tholagithe? " yendu mundina thalemaru prashnisidare howdu yennabahudu.bhrashtacharamuktha bharathada kalpanege jeeva thumbona. ide naavu thayi bharathige koduva honna kireeta