Monday 16 January 2012

ಶಾಲಾ ಸಾಂಸ್ಕೃತಿಕದಲ್ಲಿ ರಾಜಕೀಯ ಅನಿವಾರ್ಯವೇ ?


ಶಾಲೆ ಅದು ವಿಧ್ಯಾರ್ಥಿಗಳ ಪಾಲಿನ ದೇಗುಲವಿದ್ದಂತೆ .ಅಲ್ಲಿ ಮಕ್ಕಳ ಕಾರ್ಯಕ್ರಮಕ್ಕೆ ಒತ್ತಿರಬೇಕೆ ವಿನಃ ರಾಜಕೀಯಕ್ಕಲ್ಲ .ಅದು ಶೈಕ್ಷಣಿಕ , ಸಾಹಿತ್ತಿಕ  ವೇದಿಕೆ .ಬದುಕಿನ ಮೌಲ್ಯಗಳನ್ನು ಕಲಿಸುವ ,ವಿದ್ಯೆಯಿಂದ ಬೌದ್ದಿಕ  ಸ್ಥರಕ್ಕೆರಿಸುವ ದೇಗುಲವದು . ವರ್ಷವಿಡೀ ವಿಧ್ಯಾರ್ಥಿಗಳು ಪಾಠ ಪ್ರವಚನಗಳಲ್ಲಿ ತೊಡಗಿ ವರ್ಷದ ಕೊನೆಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸುತ್ತಾರೆ .ಬೆಳಗ್ಗಿನಿಂದ ತೊಡಗಿ ಸಂಜೆತನಕ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಇನ್ನಿತರ ಸಣ್ಣ ಪುಟ್ಟ ಸಾಂಸ್ಕೃತಿಕ ಕಾರ್ಯ ಕ್ರಮಗಳು  ನಡೆಯುತ್ತಿರುತ್ತವೆ.ಬಹುಮಾನವೇ ಬದುಕಿನ ಮಾನದಂಡವಲ್ಲ .ಅದು ಕೇವಲ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕೊಡುವ ಒಂದು ಪರಿಕರ ಅಷ್ಟೇ .ಬಹುಮಾನ ಪಡೆದವರೆಲ್ಲ ಪಂಡಿತರೂ ಅಲ್ಲ ,ಪಡೆಯದವರು ದದ್ದರೂ ಅಲ್ಲ .ಬಹುಮಾನ ಪಡೆಯುವುದನ್ನು ಶಾಲೆ ಕಲಿಸುವುದಿಲ್ಲ .ಶಾಲೆ ಸಮಾಜಕ್ಕೆ ಯೋಗ್ಯ ವ್ಯಕ್ತಿಗಳನ್ನು ಒದಗಿಸುತ್ತದೆ .ಅಂತ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರಗುವಾಗ ರಾಜಕೀಯದ ಅಧಿಕಪ್ರಸಂಗೀತನ ಅನಿವಾರ್ಯವೆಂದು ನನಗನಿಸುವುದಿಲ್ಲ  .
                  ವಿದ್ಯೆಯಲ್ಲಿ ಮುಂದಿಲ್ಲದವ ಇನ್ನಿತರ ಕ್ಷೇತ್ರವಾದ ಆಟೋಟಗಳಲ್ಲಿ,ಸಾಹಿತ್ತಿಕ ಸ್ಪರ್ಧೆಗಳಲ್ಲಿ ಮುಂದಿರಬಲ್ಲ .ವಿದ್ಯಾರ್ಥಿಗಳನ್ನು ನಿನಗೆ ಏನು ಗೊತ್ತಿಲ್ಲ ನೀನು ದಡ್ಡ ಎಂದು ಯಾವ ಗುರುವೂ ನಿಂದಿಸಬಾರದು .ಯಾಕೆಂದರೆ ಆ ವಿಧ್ಯಾರ್ಥಿಗೆ ಶೂನ್ಯತನ ಮನಸ್ಸಲ್ಲಿ ಉಂಟಾಗುತ್ತದೆ .ಹಾಗಾಗದಂತೆ ಗುರುಗಳು ನೋಡಿಕೊಳ್ಳಬೇಕು .ಶಾಲೆ ನಾಯಕತ್ವವನ್ನು ಕಲಿಸುತ್ತದೆ .ಆದರೆ ಅದೇ ನಾಯಕರು ಮುಂದೆ ಸಮಾಜದಲ್ಲಿ ಒಳ್ಳೆ ನಾಯಕರಾಗಬಲ್ಲರು .ಆದರೆ ಕೆಲವೊಮ್ಮೆ ಅದೇ ನಾಯಕರೆ ಬೊಗಳೆ ಬಿಡುವುದೂ ಇದೆ . ಅದು ಅವರವರಿಗೆ ಬಿಟ್ಟದ್ದು .ಆದರೆ ತಾನು ಬಗವಹಿಸುವ ಕಾರ್ಯಕ್ರಮದ ಸಮಯ ಸಂಧರ್ಭವನ್ನು ನೋಡದೆ ಒಬ್ಬನನ್ನು ಒಬ್ಬ ಹೊಗಳುತ್ತಾ ,ಒಬ್ಬನನ್ನು ಒಬ್ಬ ಮೂದಲಿಸುತ್ತಾ ಸಮಯ ವ್ಯರ್ಥ ಮಾಡುವುದು ಎಷ್ಟರ ಮಟ್ಟಿಗೆ ಸರಿ ? . 
                 ಯಾವುದೇ ಕಾರ್ಯಕ್ರಮಗಳೇ ಆಗಲಿ ಅಲ್ಲಿ ಒಬ್ಬ ಅಧ್ಯಕ್ಷ ,ಒಬ್ಬ ಉದ್ಘಾಟಕ ,ಒಬ್ಬಿಬ್ಬರು ಅತಿಥಿಗಲಿರುವುದು ಸಹಜ . ಆದರೆ ಕೆಲವೊಂದು ಶಾಲಾ ಕಾರ್ಯಕ್ರಮಗಳಲ್ಲಿ ನಾನು ನೋಡಿದಂತೆ ಪಂಚಾಯತ್ ಸದಸ್ಯರು ಮೂರ್ನಾಲ್ಕು ಜನ ,ರಾಜಕೀಯ ನೇತಾರರು ಮೂರ್ನಾಲ್ಕು ಜನ ಶಾಲಾಭಿವ್ರಿದ್ದಿ ಸಮಿತಿಯವರು ,ಶಿಕ್ಷಕ ರಕ್ಷಕ ಸಂಘದವರು ಇವರೆಲ್ಲ ಸೇರಿ ೧೦-೨೦ ಜನ ವೇದಿಕೆಯಲ್ಲಿ ಇರುತ್ತಾರೆ .ಕೆಲವರು ಭಾಷಣ ಸುರು ಮಾಡಿದರೆ ಹಿಂದಿಂದ ಚೀಟಿ ಕೊಟ್ಟರೂ ,ಅಂಗಿ ಹಿಡಿದೆಳೆದರೂ ನಿಲ್ಲಿಸುವುದಿಲ್ಲ .೪ ಘಂಟೆಗೆ ಸಭಾ ಕಾರ್ಯಕ್ರಮ ಎಂದಿದ್ದಾರೆ ಇವರು ಬರುವಾಗಲೇ ೬ ಘಂಟೆ .ಕೊರೆಯಲು ಶುರುಮಾಡಿ ಮುಗಿಸುವಾಗ ೯ ಘಂಟೆ .ಪಾಪ ಸಣ್ಣ ಮಕ್ಕಳು ೫ ಗಂಟೆಗೆ ವೇಷ ಹಾಕಿ ಕುಳಿತು ನಿದ್ದೆ ತೂಗುತ್ತಿರುತ್ತಾರೆ .ಆ ಮಕ್ಕಳು ಮತ್ತೆ ಒಟ್ಟಾರೆ ರಂಗದಲ್ಲಿ ಕುಣಿಯುತ್ತಾರೆ .ಇದ್ಯಾಕೆ ರಾಜಕೀಯ ನಾಯಕರಿಗೆ ಹೊಳೆಯುವುದಿಲ್ಲ? 
ಶಲ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಶಾಲೆಯ ಸಂಬಂದಪಟ್ಟ ವಿಚಾರದ ಬಗ್ಗೆ ಬೇಕಿದ್ದರೆ ಮಾತಾಡಲಿ .ಅದು ಬಿಟ್ಟು ನಾವು ಅಲ್ಲಿ ದಾಮಾರು ಮಾಡಿದೆವು ,ಇಲ್ಲಿ ಆಣೆಕಟ್ಟು ಮಾಡಿದೆವೆಂದು ವಿವರಿಸತೊದಗಿದರೆ ಮಕ್ಕಳಿಗೆ ಅದು ಅರ್ಥವಗುತ್ತದೆಯೇ ? ಅದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು .ಶಿಕ್ಷಕರನ್ನು ಹಿಗ್ಗಾ ಮುಗ್ಗ ಹೆದರಿಸುವ ರಾಜಕೀಯ ನಾಯಕರು ಇದ್ದಾರೆ ೫ ವರ್ಷ ಇದ್ದಾರು .ಶಾಲೆಯ ಗುರುಗಳು ಸ್ಟಂಪ್ ಪೇಪರ್ ಮೇಲೆ ಸೈನ್ ಮಡಿ ಸಂಬಳ ಪಡೆಯುವವರು,ನಿವೃತ್ತಿ ತನಕ ದುಡಿಯುತ್ತಾರೆ .ಕೊಲಾಜ್ ಗುರುಗಳಿಗೆ ಸಂಬಳ ಕೊಡುವ ಕಾಲು ಪಟ್ಟಾದರೂ ಪ್ರಾಥಮಿಕ ,ಪ್ರೌಡ ಶಾಲೆಯ ಗುರುಗಳಿಗೆ ಸಿಗುತ್ತದೆಯೇ ? ಇಲ್ಲ .ಆದರೆ ಅವರ ಕಷ್ಟ ಮಾತ್ರ ದೇವರೇ ನೋಡಬೇಕು .ಮತದಾನ ಪ್ರಕ್ರಿಯೆಯಿಂದ ಹಿಡಿದು ,ಬಿಸಿಯೂಟ ,ನಲಿ ಕಲಿ ,ಅಕ್ಷರ ದಾಸೋಹ ಪರಿಹಾರ ಭೋದನೆ ಒಂದೇ ಎರಡೆ .ಹಿರಿಯ ಪ್ರಾಥಮಿಕ ಶಾಲೆಯ ಗುರುಗಳನ್ನು ಎಷ್ಟು ಹಿಂದಿ ಹಿಪ್ಪೆ ಮಾಡಬೇಕೋ ಅಷ್ಟು ಹಿಂದಿ ಹಿಪ್ಪೆ ಮಾಡುತದೆ ಸರಕಾರ .ಅಷ್ಟೇ ಅಲ್ಲ ಎಲ್ಲಿಗೆ ಹೋಗಬೇಕಿದ್ದರೂ ಶಾಲಾ ಅಭಿವ್ರಿದ್ದಿ ಸಮಿತಿಯ ಅಧ್ಯಕ್ಷರ ಅಪ್ಪಣೆ ಪಡೆದೆ ಹೋಗ ಬೇಕು .ಪಾಪ ,ಬದುಕಿನ ಅನಿವಾರ್ಯತೆಗಾಗಿ ದುಡಿಯುವ ಅದರಲ್ಲೂ ಮಾಸ್ತ್ರುಗಲಿಗಿಂಥ ಹೆಚ್ಹು ತೊಂದರೆ ಅನುಭವಿಸುವವರು ಶಿಕ್ಷಕಿಯರು .ದೂರದ ಊರುಗಳಿಂದ ಬಂದಿರ್ತಾರೆ .ಸಣ್ಣ ಮಗುವನ್ನು ಮನೆಯಲ್ಲಿ ಬಿಟ್ಟು ಬಂದಿರ್ತಾರೆ .ಇದೆಲ್ಲ ಯಾಕೆ ಯಾರ ಕಣ್ಣಿಗೂ ಕಾಣಿಸುವುದಿಲ್ಲ ? ತಮ್ಮ ರಾಜಕೀಯದ ಬಗ್ಗೆ ಮಾತನಾಡುವ ಧುರೀಣರು ಒಮ್ಮೆ ಶಿಕ್ಷಕರಾಗಿ ನೋಡಿ .ಆಗ ಅವರ ಯಾತನೆ ನಿಮಗೆ ಅರಿವಾಗುತ್ತದೆ.ಅಷ್ತಿದ್ದೂ ಗುರುಗಳು ಸರಿಯಾದ ಸಮಯದಲ್ಲಿ ಪಾಠ ಮುಗಿಸಿ ಪರೀಕ್ಷೆಗೆ ತಯಾರಾಗಬೇಕು .ಸಕ್ರೆ ಕಾಯಿಲೆ ಇರುವವರು,ಗಂಟು ನೋವಿರುವವರು ಹೇಗೆ ಕುಣಿದು ಪಾಠ ಮಾಡಬಲ್ಲರು? .ಇದೆಲ್ಲ ಯಾಕೆ ಯಾರಿಗೂ ಅರ್ಥವಾಗುವುದಿಲ್ಲ? .ಇನಾದರೂ ರಾಜಕೀಯ ಧುರೀನರೆ ಗುರುಗಳನ್ನು ಮನುಷ್ಯರಾಗಿ ನೋಡಿ .ಶಾಲಾ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ದನಿವಾಗದಂತೆ ಭಾಷಣ ಮಾಡಿ .ನೀವು ಮಕ್ಕಳಿಂದ ವನ್ದ್ಯರಾಗಿ.

No comments:

Post a Comment